ಚಿತ್ರದುರ್ಗ ಜಿಲ್ಲೆ ಉಪವಿಭಾಗಾಧಿಕಾರಿ ವಿರುದ್ಧದ ಲಂಚದ ಆರೋಪ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ನಿನ್ನೆ ಮಾಧ್ಯಮಗಳ ಜತೆ ಮಾತನಾಡುವಾಗ ಎಸಿ ತಮಗೆ ರಾಜಶೇಖರ್ ಯಾರು ಎಂದು ಗೊತ್ತೆ ಇಲ್ಲ. ನನಗೆ ಮತ್ತು ಅವರಿಗೆ ಸಂಬಂಧವಿಲ್ಲ, ಅವರು ನನ್ನನ್ನು ಭೇಟಿಯಾಗಿಯೇ ಇಲ್ಲ ಎಂದಿದ್ದರು. ಆದರೆ ಇಂದು ಉದ್ಯಮಿ ರಾಜಶೇಖರ್ ಜತೆ ಎಸಿ ತಿಪ್ಪೇಸ್ವಾಮಿ ಮಾತನಾಡಿರುವ ಮತ್ತೊಂದು ಆಡಿಯೋ ಬಿಡುಗಡೆಯಾಗಿದೆ. ಈ ಮೂಲಕ ಎಸಿ ರಾಜಶೇಖರ್ ಗೊತ್ತಿಲ್ಲ ಎಂದು ಹೇಳಿರುವುದು ಸುಳ್ಳೆಂದು ಸಾಬೀತಾಗಿದೆ.