ಟಾಟಾ ವಾಹನ-ಬಸ್ ನಡುವೆ ಭೀಕರ ಅಪಘಾತ: 6 ಮಂದಿ ಸ್ಥಳದಲ್ಲಿಯೇ ಸಾವು

ಗುರುವಾರ, 8 ಅಕ್ಟೋಬರ್ 2015 (15:52 IST)
ಟಾಟಾ ಮ್ಯಾಜಿಕ್ ವಾಹನ ಮತ್ತು ಕೆಎಸ್ಆರ್‌ಟಿಸಿ ಬಸ್ ನಡುವೆ ಇಂದು ಸಂಭವಿಸಿದ ಭೀಕರ ಅಪಘಾತದಲ್ಲಿ ವಾಹನದಲ್ಲಿದ್ದ 20 ದಿನಗಳ ಮಗೂ ಸೇರಿದಂತೆ ಆರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಇಂದು ಇಲ್ಲಿನ ಭಗವತಿ ಗ್ರಾಮದ ಬಳಿ ನಡೆದಿದೆ. 
 
ಅಪಘಾತದಲ್ಲಿ ಮೃತಪಟ್ಟವರನ್ನು ಮ್ಯಾಜಿಕ್ ವಾಹನದ ಚಾಲಕ ಮಂಜಪ್ಪ(25), ಆತನ ಅತ್ತೆ ಯಲ್ಲವ್ವಾ(65) ಮತ್ತು ಸೊಸೆಯಂದಿರಾದ ವೆಂಕವ್ವ(25), ಪಾರ್ವತೆವ್ವಾ(26) ಹಾಗೂ 20 ದಿನದ ಮಗು ಅಪ್ಪಣ್ಣ, ಮತ್ತೋರ್ವ ವ್ಯಕ್ತಿ ರಾಮಣ್ಣ(30) ಎಂದು ಹೇಳಲಾಗಿದೆ. ಮೃತರಲ್ಲಿ ಆವರು ಭೈರಮಟ್ಟಿ ಗ್ರಾಮದ ನಿವಾಸಿಗಳಾಗಿದ್ದರೆ ಮತ್ತೋರ್ವ ಮಹಿಳೆ ಹಳ್ಳೂರು ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. 
 
ಈ ಎಲ್ಲರೂ ಕೂಡ ಮ್ಯಾಜಿಕ್ ವಾಹನದಲ್ಲಿ ಬಾಗಲಕೋಟೆಯಿಂದ ಭೈರಮಟ್ಟಿಗೆ ತೆರಳುತ್ತಿದ್ದರೆ, ಸರ್ಕಾರಿ ಬಸ್ ಮುದ್ದೆಬಿಹಾಳದಿಂದ ಬಾಗಲಕೋಟೆಗೆ ಬರುತ್ತಿತ್ತು. ಈ ವೇಳೆ ಭಗವತಿ ಗ್ರಾಮದ ಬಳಿ ಎದುರು ಬದುರಾದಾಗ ಈ ದುರಂತ ಸಂಭವಿಸಿದೆ. 
 
ಮಾಹಿತಿ ತಿಳಿದ ಪೊಲೀಸರು ಬಾಗಲಕೋಟೆ ಗ್ರಾಮಾಂತರ ಠಾಣೆ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ