ಶಿವಣ್ಣನ ನೋಡಲು ಸಾಗರೋಪಾದಿಯಾಗಿ ಹರಿದು ಬಂದ ಚಿತ್ರ ತಾರೆಯರು

ಮಂಗಳವಾರ, 6 ಅಕ್ಟೋಬರ್ 2015 (18:10 IST)
ಸ್ಯಾಂಡಲ್‌ವುಡ್‌ನ ಖ್ಯಾತ ನಟ ಶಿವರಾಜ್ ಕುಮಾರ್ ಅವರು ಭುಜ ಹಾಗೂ ಎದೆ ನೋವಿನಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಕನ್ನಡ ಚಿತ್ರರಂಗದ ಹಲವು ತಾರೆಯರು ಇಂದು ಸಾಗರೋಪಾದಿಯಾಗಿ ನಗರದ ಮಲ್ಯ ಆಸ್ಪತ್ರೆಗೆ ಆಗಮಿಸಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.  
 
ಶಿವರಾಜ್ ಕುಮಾರ್ ಅವರ ತಾಯಿ ಪಾರ್ವತಮ್ಮ ರಾಜ್ ಕುಮಾರ್, ಸಹೋದರರಾದ ಪುನಿತ್ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ವಿನಯ್ ರಾಘವೇಂದ್ರ, ತಾರೆಗಳಾದ ಪ್ರೇಮ್, ರಕ್ಷಿತಾ, ನೆನಪಿರಲಿ ಪ್ರೇಮ್, ವಿ.ರವಿಚಂದ್ರನ್, ತಾರಾ, ಸುಧಾರಾಣಿ ಸೇರಿದಂತೆ ಇನ್ನಿತರರು ಆಸ್ಪತ್ರೆಗೆ ಆಗಮಿಸಿ ಕುಶಲೋಪರಿ ವಿಚಾರಿಸಿ ತೆರಳಿದರು. 
 
ಕೊನೆಗೆ ಅಭಿಮಾನಿಗಳ ಅಬ್ಬರ ಜೋರಾದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಕಿಟಕಿಯೊಂದರ ಮೂಲಕ ಸ್ವತಋ ನಟ ಸಿವರಾಜ್ ಕುಮಾರ್ ಅವರೇ ಬಂದು ತಮ್ಮ ಅಭಿಮಾನಿಗಳತ್ತ ಕೈ ಬೀಸಿ ನಾನು ಆರೋಗ್ಯವಾಗಿದ್ದೇನೆ. ಭಯ ಪಡುವ ಅವಶ್ಯಕತೆ ಇಲ್ಲ. ಧೈರ್ಯವಾಗಿರಿ ಎಂದು ಹೇಳಿ ತೆರಳಿದರು. 
 
ಇನ್ನು ಶಿವರಾಜ್ ಕುಮಾರ್ ಅರ ಆರೋಗ್ಯದ ಬಗ್ಗೆ ನಾನು ಅವರ ಅಲಿಯನೊಂದಿಗೆ ಈಗಾಗಲೇ ಚರ್ಚಿಸಿದ್ದೇನೆ. ಅವರು ಎಂದಿನಂತೆ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ಊಟವನ್ನು ಸಮಯಕ್ಕೆ ಸರಿಯಾಗಿ ಸೇವಿಸದ ಕಾರಣ ಈ ರೀತಿಯ ತೊಂದರೆಯಾಗಿತ್ತು ಎಂದಿದ್ದಾರೆ ಎಂದು ಸಚಿವ, ನಟ ಅಂಬರೀಶ್ ಅವರು ಮಾಧ್ಯಮಗಳಿಗೆ ತಿಳಿಸಿದರು. 
 
ಇನ್ನು ಇಂದು ಬೆಳಗ್ಗೆ ವ್ಯಾಯಾಮ ಮಾಡುತ್ತಿದ್ದ ವೇಳೆಯಲ್ಲಿ ತಮ್ಮ ಬಲ ಭುಜದಲ್ಲಿ ನೋವು ಕಾಣಿಸಿಕೊಂಡಿದೆ ಎಂಬ ಕಾರಣದಿಂದ ನಟ ಶಿವರಾಜ್ ಕುಮಾರ್ ಅವರು ಮಲ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ ಯಾವುದೇ ತೊಂದರೆ ಇಳ್ಲದೆ ಶಿವರಾಜ್ ಕುಮಾರ್ ಆರೋಗ್ಯವಾಗಿದ್ದಾರೆ ಎಂಬುದಾಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ