ಸೋಮವಾರ ಮಠದ ವತಿಯಿಂದ ಡಿಕೆ ರವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡುತ್ತಿದ್ದ ಅದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು ರವಿ ಅಣ್ಣ ರಮೇಶ್ರವರ ಮಗನ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಮಠ ನೋಡಿಕೊಳ್ಳಲಿದೆ. ಆತನಿಗೆ ಉತ್ತಮ ಶಿಕ್ಷಣವನ್ನು ನೀಡುವ ಹೊಣೆ ನಮ್ಮದು. ರೋಹನ್ನನ್ನು ದತ್ತು ಪಡೆದು ಐಎಎಸ್ ಓದಿಸಿ ರವಿ ಅವರಂತೆ ದಕ್ಷ ಅಧಿಕಾರಿಯಾಗಿಸುತ್ತೇವೆ ಎಂದು ಹೇಳಿದ್ದಾರೆ.
ರವಿ ಕಡು ಬಡತನದಲ್ಲೂ ಕಷ್ಟಪಟ್ಟು ಓದಿ ಮುಂದೆ ಬಂದರು. ಅಲ್ಲದೇ ಪ್ರಾಮಾಣಿಕತೆ, ದಕ್ಷತೆಯಿಂದ ಜನರ ಒಳಿತಿಗೆ ಶ್ರಮಿಸಿದರು. ಆದರೆ ಅವರನ್ನು ನಾವು ಬಲುಬೇಗ ಕಳೆದುಕೊಳ್ಳಬೇಕಾಯಿತು. ರವಿ ಅವರಂತೆ ರೋಹನ್ ಕೂಡ ದಕ್ಷ ಐಎಎಸ್ ಅಧಿಕಾರಿಯಾಗಬೇಕು ಎಂಬುದು ನಮ್ಮಹಂಬಲವಾಗಿದ್ದು, ಆತನನ್ನು ಆ ದಿಶೆಯಲ್ಲಿ ಬೆಳೆಸಲು ತಮ್ಮ ಮಠ ಸದಾ ತತ್ಪರವಾಗಿರಲಿದೆ ಎಂದು ನಿರ್ಮಲಾನಂದ ಶ್ರೀಗಳು ಭರವಸೆ ನೀಡಿದ್ದಾರೆ.