ಸಚಿವ ಆಂಜನೇಯ ಪ್ರಕರಣದ ಚರ್ಚೆಗೆ ಅವರು ನಿಲುವಳಿ ಸೂಚನೆಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ ನಡೆದು, ತೀವ್ರ ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ವಿಧಾನಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಸಭಾಪತಿ ಶಂಕರಮೂರ್ತಿ ಮುಂದೂಡಿದರು. ವಿಧಾನಮಂಡಲದ ಚಳಿಗಾಲದ ಅಧಿವೇಶನ ಮುಕ್ತಾಯವಾಗಿದ್ದು, ವಿಧಾನಸಭೆ ಕಲಾಪವನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಮುಂದೂಡುವುದರೊಂದಿಗೆ 10 ದಿನಗಳಲ್ಲಿ ಕೇವಲ 24 ಗಂಟೆಗಳು ಕಲಾಪ ನಡೆದಿವೆ. ಪ್ರಸಕ್ತ ಅಧಿವೇಶನದಲ್ಲಿ 6 ವಿಧೇಯಕಗಳು ಅಂಗೀಕಾರವಾಗಿವೆ. ವಿಧಾನಸಭೆ ಕಲಾಪದಲ್ಲಿ ನಾಲ್ಕು ವಿವಿಧ ವರದಿಗಳು ಮಂಡನೆಯಾಗಿವೆ. ಒಂದು ವಿಧೇಯಕವನ್ನು ರಾಜ್ಯಸರ್ಕಾರ ವಾಪಸ್ ಪಡೆದಿದೆ.