ನಿಗಮ, ಮಂಡಳಿಯಲ್ಲಿ ಸಿಎಂ ತೆಗೆದುಕೊಂಡ ನಿರ್ಧಾರವನ್ನು ಸಚಿವ ಆಂಜನೇಯ ಸಮರ್ಥಿಸಿಕೊಂಡಿದ್ದು, ಸಚಿವ ಅಂಬರೀಷ್ ಅವರ ಟೀಕೆಗೆ ಟಾಂಗ್ ನೀಡಿದ್ದಾರೆ.
ಸಚಿವ ಅಂಬರೀಷ್ ಕೂಡ ನಮ್ಮ ನಾಯಕರೇ. ಎಲ್ಲರೊಂದಿಗೆ ಚರ್ಚಿಸಿ ನಿಗಮ, ಮಂಡಳಿಗೆ ನೇಮಕ ಮಾಡಲಾಗಿದೆ ಎಂದು ಸಚಿವ ಆಂಜನೇಯ ಅವರು ಹೇಳಿದ್ದಾರೆ. ಅಂಬರೀಷ್ ಕೂಡ ನಮ್ಮ ನಾಯಕರೇ, ಅವರನ್ನು ಕಡೆಗಣಿಸಿದ್ದಾರೆಂಬ ಭಾವನೆ ಕೂಡ ಸರಿಯಿಲ್ಲ.