ಹೌದು, ನಿನ್ನೆಯಷ್ಟೇ ಪಾಂಡವಪುರದ ಗಾಣದಹೊಸೂರಿನಲ್ಲಿ ರೈತನೋರ್ವ ಆತ್ಮಹತ್ಯೆಗೆ ಶರಣಾಗಿದ್ದ ಸುದ್ದಿ ಇನ್ನು ಹಸಿರಾಗಿರುವಾಗಲೇ ಇಂದು ಮತ್ತೊಂದು ಆತ್ಮಹತ್ಯೆ ಸುದ್ದಿ ಕೇಳಿ ಬರುತ್ತಿರುವುದು ದುರಾದೃಷ್ಟಕರ. ಅಲ್ಲದೆ ಇದು ರಾಜ್ಯದಲ್ಲಿನ ರೈತರ ದುಸ್ಥಿತಿಯನ್ನು ತೋರಿಸುತ್ತದೆ.
ಇನ್ನು ಈತನೂ ಕೂಡ ಕಬ್ಬು ಬೆಳೆಗಾರ ಎಂದು ಹೇಳಲಾಗಿದ್ದು, 5 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಸಾಲ ತೀರಿಸಲಾಗಿದೆ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ.