ಮುಂದಿನ 2 ವರ್ಷ ನಾನು ಸಚಿವನಾಗಿರೋದು ಗ್ಯಾರೆಂಟಿ: ಶಾಮನೂರು

ಗುರುವಾರ, 28 ಏಪ್ರಿಲ್ 2016 (17:48 IST)
ಮುಂದಿನ 2 ವರ್ಷ ನಾನು ಸಚಿವನಾಗಿರೋದು ಗ್ಯಾರೆಂಟಿ ಎಂದು ತೋಟಗಾರಿಕೆ ಸಚಿವ ಶಾಮನೂರು ಶಿವಶಂಕರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಾಮನೂರು ಶಿವಶಂಕರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರವಧಿಯನ್ನು ಪೂರ್ಣಗೊಳಿಸುತ್ತಾರೆ. ಯಾವುದೇ ಅನುಮಾನ ಬೇಡ ಎಂದು ತಿಳಿಸಿದ್ದಾರೆ.
 
ಪಕ್ಷಕ್ಕೆ ಬಹುಮತ ಬಂದಾಗ ಅದೃಷ್ಟವಂತರಿಗೆ ಸಿಎಂ ಪಟ್ಟ ದೊರೆಯುತ್ತದೆ ಈ ವಿಚಾರದಲ್ಲಿ ಸಿದ್ದರಾಮಯ್ಯನವರು ತುಂಬಾ ಅದೃಷ್ಟವಂತರು ಎಂದು ಹೊಗಳಿದರು.  
 
ಮುಖ್ಯಮಂತ್ರಿ ಬದಲಾವಣೆಯಾಗಬೇಕು ಎನ್ನುವ ಬಗ್ಗೆ ಕೆಲ ಮುಖಂಡರು ಸಭೆ ನಡೆಸುತ್ತಿದ್ದಾರೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ. ಆದರೆ, ಯಾರು ಎಲ್ಲಿ ಬೇಕಾದರೂ ಈ ಬಗ್ಗೆ ಸಭೆ ನಡೆಸಲಿ ಮುಖ್ಯಮಂತ್ರಿ ಬದಲಾವಣೆ ಮಾತ್ರ ಖಂಡಿತ ಸಾಧ್ಯವಿಲ್ಲ ಎಂದು ಭಿನ್ನಮತಿಯರಿಗೆ ಶಾಮನೂರು ತಿರುಗೇಟು ನೀಡಿದ್ದಾರೆ.
 
ವಿಪಕ್ಷಗಳು ಮನಬಂದಂತೆ ಹೇಳಿಕೆ ನೀಡುತ್ತಾ ಸುಳ್ಳು ಪ್ರಚಾರದಲ್ಲಿ ತೊಡಗಿದ್ದು, ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸುವ ಷಡ್ಯಂತ್ರ ರೂಪಿಸಿವೆ ಎಂದು ಸಚಿವ ಶಾಮನೂರು ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ