ದೆಹಲಿಯ ರಸ್ತೆಗಳ ಮೇಲೆಲ್ಲಾ ಬಿಜೆಪಿ ಕಸ ಚೆಲ್ಲುತ್ತಿದೆ. ದೆಹಲಿ ಸಮಸ್ಯೆಗೆ ಆಪ್ ಕಾರಣ ಎಂಬಂತೆ ಬಿಂಬಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ದೆಹಲಿಯ ಎಲ್ಲಾ ಪಾಲಿಕೆಗಳಿಗೆ ಹಣ ಬಿಡುಗಡೆ ಮಾಡಿದ್ದರೂ ಸಂಬಂಧಪಟ್ಟ ವ್ಯಕ್ತಿಗಳಿಗೆ ಅದು ತಲುಪಿಲ್ಲ ಎಂದು ಸಿಎಂ ಆರೋಪಿಸಿದರು. ಎಂಸಿಡಿ ಬಳಿ ಹಣದ ಲೆಕ್ಕ ಕೇಳಿದರೆ ತೋರಿಸುತ್ತಿದೆ. ದುರ್ಬಳಕೆಯಾದ ಬಗ್ಗೆ ಖಚಿತ ಮಾಹಿತಿಯಿದೆ. ಎಂಸಿಡಿಗೆ ಕೊಟ್ಟ ಹಣ ಎಲ್ಲಿ ಹೋಯಿತು ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.