ಮಾರಣಾಂತಿಕ ಹಲ್ಲೆ: ಟೋಲ್ಗೇಟ್ಗೆ ಬೆಂಕಿ ಹಚ್ಚಿದ ಉದ್ರಿಕ್ತ ಜನರು
ಭಾನುವಾರ, 19 ಏಪ್ರಿಲ್ 2015 (13:23 IST)
ಟೋಲ್ ನೀಡಲು ನಿರಾಕರಿಸಿದ ವ್ಯಕ್ತಿ ಮೇಲೆ ಟೋಲ್ ಸಿಬ್ಬಂದಿಯೊಬ್ಬ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಹೊಸಕೋಟೆ ಬಳಿಕ ಬೂದಿಗೆರೆ ಕ್ರಾಸ್ನ ಲ್ಯಾಮ್ಕೋ ಕಂಪನಿ ಟೋಲ್ ಬಳಿ ಸಂಭವಿಸಿದೆ. ಇದರಿಂದ ರೊಚ್ಚಿಗೆದ್ದ ಜನರ ಗುಂಪು ಟೋಲ್ ಮೇಲೆ ದಾಳಿ ನಡೆಸಿದರಲ್ಲದೇ ಟೋಲ್ ಸಿಬ್ಬಂದಿಗೆ ಮನಬಂದಂತೆ ಥಳಿಸಿದರು.
ಟೋಲ್ ಕಟ್ಟಲು ನಿರಾಕರಿಸಿದ ಕಾಟಮ್ ನಲ್ಲೂರು ನಿವಾಸಿ ಮಂಜುನಾಥ್ ತನ್ನ ಬಳಿ ಪಾಸ್ ಇದೆ ಎಂದು ಹೇಳಿದರೂ ಟೋಲ್ ಸಿಬ್ಬಂದಿ ಕೆಟ್ಟ ಮಾತುಗಳಿಂದ ಬೈದು ಅವನನ್ನು ಎಳೆದೊಯ್ದು ಅವನ ಮೇಲೆ ಮಾರಣಾಂತಿಕ ಹಲ್ಲೆಯನ್ನು ಮಾಡಿದ್ದರು.
ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಆ ಸಿಬ್ಬಂದಿಯನ್ನು ಚೆನ್ನಾಗಿ ಥಳಿಸಿದರು. ಟೋಲ್ಗೇಟ್ ಮೇಲೆ ಕಲ್ಲುತೂರಾಟ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು ಮತ್ತು ಟೋಲ್ಗೇಟ್ಗೆ ಬೆಂಕಿ ಹಚ್ಚಿ ಧ್ವಂಸಗೊಳಿಸಿದರು. ಪರಿಸ್ಥಿತಿ ನಿಯಂತ್ರಿಸಲು ಆವಲಹಳ್ಳಿ ಪೊಲೀಸರು ಹರಸಾಹಸ ಪಡಬೇಕಾಯಿತು.