ವಿದೇಶಿ ಪ್ರಜೆಯಿಂದ ಗಿಫ್ಟ್ ಪಡೆದರೆ ತಪ್ಪಾಗುತ್ತದೆ, ಆದರೆ, ಗಿರೀಶ್ ಚಂದ್ರ ವರ್ಮಾ ಭಾರತ ದೇಶದ ನಾಗರಿಕರಾಗಿದ್ದರಿಂದ ವಿದೇಶಿ ವಿನಿಮಯ ಕಾನೂನು ಉಲ್ಲಂಘನೆಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ಆದರೆ, ಸಿಎಂ ಸಿದ್ದರಾಮಯ್ಯ ಸ್ಪಷ್ಟನೆಗೆ ತೃಪ್ತರಾಗದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಸುಮ್ಮನೇ ಏನೋ ಒಂದು ಉತ್ತರ ನೀಡಿದರೆ ಸಾಲದು ಸಂಪೂರ್ಣ ತನಿಖೆಯಾಗಲಿ ಎಂದು ಒತ್ತಾಯಿಸಿದರು. ಇದರಿಂದ ಸಿಎಂ ಸಿದ್ದರಾಮಯ್ಯ ಮತ್ತು ಶೆಟ್ಟರ್ ಮಧ್ಯೆ ಮಾತಿನ ಚಕಮಕಿ ನಡೆಯಿತು.