ಪೋಲಿ ಜ್ಯೋತಿಷಿಗೆ ಮಹಿಳೆಯರಿಂದ ಸಖತ್ ಧರ್ಮದೇಟು

ಗುರುವಾರ, 24 ಜುಲೈ 2014 (18:13 IST)
ಕಮಲಾನಗರದಲ್ಲಿ ನಕಲಿ ಜ್ಯೋತಿಷಿಗೆ ಮಹಿಳೆಯರು ಸಖತ್ ಗೂಸಾ ನೀಡಿದ ಪ್ರಕರಣ ವರದಿಯಾಗಿದೆ. ತಮಿಳುನಾಡು ಮೂಲದ ಕುಮಾರ್ ಜ್ಯೋತಿಷಿಯೆಂದು ಹೇಳಿಕೊಂಡು  ಮಕ್ಕಳಾಗದವರಿಗೆ ಸಂತಾನ ಕರುಣಿಸುತ್ತೇನೆ, ಪ್ರಿಯಕರ ಬಿಟ್ಟು ಹೋಗಿದ್ದರೆ ಪ್ರಿಯಕರನನ್ನು ವಾಪಸ್ ಕರೆಸುತ್ತೇನೆ, ದುಡ್ಡು ಕಳೆದುಕೊಂಡವರಿಗೆ ದುಡ್ಡು ಕೊಡಿಸುವುದಾಗಿ ಹೇಳುತ್ತಿದ್ದ.

ಜನರಿಂದ 30ರಿಂದ 40 ಸಾವಿರ ರೂ. ಹಣವನ್ನು ಕೀಳುತ್ತಿದ್ದ.   ಅಮಾಯಕ ಹೆಣ್ಣು ಮಕ್ಕಳನ್ನು ಪೂಜೆಗೆ ಕರೆಸಿಕೊಂಡು ಮುಟ್ಟಬಾರದ ಜಾಗದಲ್ಲೆಲ್ಲಾ ಮುಟ್ಟುತ್ತಿದ್ದನೆಂದು ಮಹಿಳೆಯರು ಆರೋಪಿಸಿದ್ದಾರೆ.ಪೂಜೆ ಮಾಡಿಸುತ್ತೇನೆಂದು ಮಹಿಳೆಯರನ್ನು ಕರೆದು, ಪೂಜೆಗೆ ಬರುವಾಗ ನೈಟಿ ಹಾಕಿಕೊಂಡು ಬರಬೇಕು ಎಂದು ಹೇಳುತ್ತಿದ್ದ.

 ಸುತ್ತಮುತ್ತಲಿನ  ಜನರು ನಕಲಿ ಜ್ಯೋತಿಷಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈಗ ನಕಲಿ ಜ್ಯೋತಿಷಿ ಬಸವೇಶ್ವರ ನಗರ ಪೊಲೀಸರ ವಶದಲ್ಲಿದ್ದಾನೆ. 
 

ವೆಬ್ದುನಿಯಾವನ್ನು ಓದಿ