ಬಾಲಕನಿಗೆ ಬಾಸುಂಡೆ : ವಾರ್ಡನ್‌ಗಳ ಪೈಶಾಚಿಕ ಕೃತ್ಯ

ಶುಕ್ರವಾರ, 22 ಆಗಸ್ಟ್ 2014 (16:35 IST)
ಡೇರಿಸರ್ಕಲ್ ಬಳಿಯ ಸರ್ಕಾರಿ ರಿಮಾಂಡ್ ಹೋಮ್‌ನಲ್ಲಿ   13 ವರ್ಷದ ಬಾಲಕನ ಮೇಲೆ ವಾರ್ಡನ್‌ಗಳು ಸಿಕ್ಕಾಪಟ್ಟೆ ಥಳಿಸಿ ಯಮಹಿಂಸೆ ನೀಡಿದ ಘಟನೆ ವರದಿಯಾಗಿದೆ. ಟಾಯ್ಲೆಟ್ ಕ್ಲೀನ್ ಮಾಡಲು ಬಾಲಕ  ನಿರಾಕರಿಸಿದ್ದರಿಂದ ಪಿವಿಸಿ ಪೈಪ್‌ನಿಂದ ಬಾಸುಂಡೆ ಬರುವಂತೆ ಬಾರಿಸಿದ್ದಾರೆ. ತಾಯಿ ಮನೆಗೆ ಕರೆತಂದಾಗ ಬಾಲಕ ಏಕಾಏಕಿ ಕುಸಿದುಬಿದ್ದ.

ವಾರ್ಡನ್ ರಮೇಶ್, ಸಂತೋಷ್ ಮತ್ತು ನರಸಿಂಹ ಎಂಬುವರು ಸೇರಿ ಪಿವಿಸಿ ಪೈಪ್‌ನಿಂದ 6ನೇ ತರಗತಿ ವಿದ್ಯಾರ್ಥಿ ಮೇಲೆ ಸಿಕ್ಕಾಪಟ್ಟೆ ಹೊಡೆದರು. ಯಶವಂತಪುರದ ಆದರ್ಶ ಶಾಲೆಯ ವಿದ್ಯಾರ್ಥಿಯಾಗಿದ್ದ ಬಾಲಕ ಶಾಲೆ ಮುಗಿದ ಮೇಲೆ ಚಾಮರಾಜಪೇಟೆ ಬಳಿ ದಾರಿತಪ್ಪಿ ಸುತ್ತಾಡುತ್ತಿದ್ದ ಬಾಲಕನನ್ನು ಹಿಡಿದು ಕಳೆದುಹೋಗಿದ್ದಾನೆಂದು ಹೇಳಿ ಕಾರಿನಲ್ಲಿ  ರಿಮಾಂಡ್‌ಹೋಂಗೆ  ಕರೆದುಕೊಂಡು ಹೋದ ವಾರ್ಡನ್‌‌‌ಗಳು  ಟಾಯ್ಲೆಟ್ ಕ್ಲೀನ್ ಮಾಡುವಂತೆ ಬಾಲಕನಿಗೆ ಸೂಚಿಸಿದರು.

ಬಾಲಕ ನಿರಾಕರಿಸಿದಾಗ ಅವನಿಗೆ ಮೂವರೂ ಪಿವಿಸಿ ಪೈಪ್‌ನಿಂದ ಮೈಮೇಲೆ ಬೊಕ್ಕೆಗಳು ಬರುವಂತೆ ಥಳಿಸಿದರು. ಆರೋಪಿಗಳನ್ನು ವಿಲ್ಸನ್ ಗಾರ್ಡನ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ತನಿಖೆ ನಡೆಸಿದ್ದಾರೆ.  

ವೆಬ್ದುನಿಯಾವನ್ನು ಓದಿ