ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀಗಳು ವೀರಶೈವರು, ಲಿಂಗಾಯತರು ಎಂದು ಭೇದ ಭಾವ ಮಾಡುತ್ತಿದ್ದಾರೆ. ಅಲ್ಲದೆ ಬಸವಣ್ಣನವರ ವಚನಗಳು ಕೇವಲ ಲಿಂಗಾಯತರನ್ನು ಮಾತ್ರ ಪ್ರತಿನಿಧಿಸುತ್ತಿದ್ದು, ವೀರಶೈವ ಸಮುದಾಯಕ್ಕೆ ಅನ್ವಯವಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅವರ ಈ ವರ್ತನೆ ಸಮುದಾಯವನ್ನು ಒಡೆಯವುದುದೇ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಡ್ಡಪಲ್ಲಕ್ಕಿ ಎಂಬ ಹೆಸರಿನಲ್ಲಿ ಬದುಕಿರುವಾಗಲೇ ಜನರ ಮೇಲೆ ಸವಾರಿ ಮಾಡುವ ರಂಭಾಪುರಿ ಪೀಠದ ರೇಣುಕಾ ವೀರಸೋಮೇಶ್ವರ ಸ್ವಾಮೀಜಿ ಶ್ರೀಗಳು, ಕೇದಾರ ಶ್ರೀಗಳು ಸಮುದಾಯವನ್ನು ಹೊಡೆಯುವ ತಂತ್ರವನ್ನು ಮಾಡುತ್ತಿದ್ದಾರೆ. ಅವರ ಈ ಕುತಂತ್ರಗಳಿಂದ ಸರ್ಕಾರದ ಹಲವು ಸೌಲಭ್ಯಗಳು ಲಿಂಗಾಯತ ಸಮುದಾಯಕ್ಕೆ ಸಿಗದೆ ಕೈ ತಪ್ಪಿ ಹೋಗುತ್ತಿವೆ. ಇನ್ನು ಮುಂದೆ ಬಸವಣ್ಣನವರ ವಚನಗಳು ಹಾಗೂ ಸುದ್ದಿಗೆ ಅವರು ಬರಬಾರದು ಎಂದು ಮಾತೆ ಮಹಾದೇವಿ ಅವರು ನಿನ್ನೆಯಷ್ಟೇ ಪ್ರತಿಕ್ರಿಯಿಸಿದ್ದರು.