ಬಿಬಿಎಂಪಿಯಲ್ಲಿ ವ್ಯಾಪಕ ಭ್ರಷ್ಟಾಚಾರವಿದ್ದು, ಆಡಳಿತದಲ್ಲಿ ಪಾರದರ್ಶಕತೆ ತರಲು ತಾವು ಬಿಬಿಎಂಪಿ ವಿಭಜನೆ ಮಾಡಿದ್ದಾಗಿ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅಭಿವೃದ್ಧಿಗೋಸ್ಕರ ಬಿಬಿಎಂಪಿ ವಿಭಜನೆ ಮಾಡುತ್ತಿದ್ದೇವೆ. ರಾಜ್ಯಪಾಲರಿಗೆ ಪ್ರವಾಸಕ್ಕೆ ಹೋಗಬೇಡಿ ಎಂದು ಹೇಳುವ ಹಕ್ಕು ನಮಗಿಲ್ಲ. ಬಿಲ್ ಪಾಸಾದ ನಂತರ ರಾಜ್ಯಪಾಲರು ಇರುವ ಜಾಗಕ್ಕೇ ಬಿಲ್ ಕಳಿಸುತ್ತೇವೆ ಎಂದು ಸಿಎಂ ಹೇಳಿದರು.