ಬಿಬಿಎಂಪಿ ಚುನಾವಣೆ: ಮತದಾನಕ್ಕೆ ಬಂದಿದ್ದ ಯುವಕ ಸಾವು

ಶನಿವಾರ, 22 ಆಗಸ್ಟ್ 2015 (11:58 IST)
ಮತದಾನ ಮಾಡಲೆಂದು ತನ್ನ ತಂದೆ-ತಾಯಿಗಳ ಜತೆ ಬಂದಿದ್ದ ಯುವಕನೋರ್ವ ತಲೆಯ ಮೇಲೆ ಮರದ ಕೊಂಬೆ ಬಿದ್ದು ಆತ ದುರ್ಮರಣವನ್ನಪ್ಪಿರುವ  ಘಟನೆ ಶಿವಾಜಿನಗರ ವಾರ್ಡ್‌ನಲ್ಲಿ ನಡೆದಿದೆ. 
 
ಶಿವಾಜಿನಗರ ನಿವಾಸಿ ಫಯಾಜ್ (22) ಮೃತ ಯುವಕ. ಇದೇ ಮೊದಲ ಬಾರಿಗೆ ಆತ ಮತದಾನ ಮಾಡುವವನಿದ್ದ. 
 
ಶಿವಾಜಿನಗರದ ವಾರ್ಡ್ ನಂ 92ಕ್ಕೆ ಮತ ಚಲಾಯಿಸಲು ಬಂದಾಗ ಮತಗಟ್ಟೆಯ ಬಳಿ ಇದ್ದ ಮರವೊಂದರ ಕೊಂಬೆ ಒಂದು ಇವರ ತಲೆ ಮೇಲೆ ಬಿದ್ದಿದೆ. ಗಾಯಗೊಂಡಿದ್ದ ಈತನನ್ನು ತಕ್ಷಣ  ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಬೆಳಗ್ಗೆ  8.30ರ ಸುಮಾರಿಗೆ ಈ ಘಟನೆ ಸಂಭವಿಸಿದೆ.

ವೆಬ್ದುನಿಯಾವನ್ನು ಓದಿ