ಉಪಚುನಾವಣೆಗೆ ಮುನ್ನವೇ ಸೋಲೋಪ್ಪಿದ ಸಿಎಂ ಸಿದ್ದರಾಮಯ್ಯ: ಯಡಿಯೂರಪ್ಪ

ಸೋಮವಾರ, 13 ಮಾರ್ಚ್ 2017 (12:30 IST)
ಉಪಚುನಾವಣೆಗೆ ಮುನ್ನವೇ ಸಿಎಂ ಸಿದ್ದರಾಮಯ್ಯ ಸೋಲೋಪ್ಪಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
 
ಉಪಚುನಾವಣೆ ಕಳಲೆ ಕೃಷ್ಣಮೂರ್ತಿ ಮತ್ತು ಶ್ರೀನಿವಾಸ್ ಪ್ರಸಾದ್ ಮಧ್ಯೆ ನಡೆಯುತ್ತಿದೆಯೇ ಹೊರತು ನನ್ನ ವಿರುದ್ಧವಲ್ಲ ಎಂದು ಹೇಳಿಕೆ ನೀಡಿ ಯುದ್ಧಕ್ಕೆ ಮೊದಲ ಶಸ್ತ್ರಾಸ್ತ್ರ ಕೆಳಗಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
 
ಹತಾಶರಾಗಿರುವುದು ನಾನೋ ಸಿಎಂ ಸಿದ್ದರಾಮಯ್ಯನೋ ಎಂದು ಪ್ರಶ್ನಿಸಿದ ಅವರು, ಉಪಚುನಾವಣೆ ಪ್ರಚಾರದಲ್ಲಿ ಜನಸೇರುತ್ತಿರುವುದು ನೋಡಿದಲ್ಲಿ ನಾನು ಪ್ರಚಾರಕ್ಕಾಗಿ ಆಗಮಿಸಿರುವುದೋ, ವಿಜಯೋತ್ಸವಕ್ಕಾಗಿ ಆಗಮಿಸಿರುವುದೋ ಎನ್ನುವ ಅನುಮಾನ ಉಂಟಾಗುತ್ತದೆ ಎಂದರು.
 
ಮುಂದಿನ ಆರು ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ ಸರಕಾರ ಉರುಳುವುದು ಖಚಿತ. ಡೈರಿ ಪ್ರಕರಣವನ್ನು ಸಿಬಿಐ ವಹಿಸಿದಲ್ಲಿ ಕಾಂಗ್ರೆಸ್ ಪಕ್ಷದ ಅತಿರಥ ಮಹಾರಥ ಗಣ್ಯರು ಜೈಲು ಸೇರಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ