ಬೆಳಗಾವಿ ಅಧಿವೇಶನ: ಬಿಜೆಪಿ ಶಾಸಕರಿಗೆ ಹಿರಿಯ ಮುಖಂಡರ ಕ್ಲಾಸ್

ಗುರುವಾರ, 20 ನವೆಂಬರ್ 2014 (16:54 IST)
ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಶಾಸಕಾಂಗ ಸಭೆ ನಡೆದಿದ್ದು, ಶಾಸಕರಿಗೆ ಹಿರಿಯ ನಾಯಕರು ಪಾಠ ಮಾಡಿದರು.  ಬೆಳಗಾವಿ ಅಧಿವೇಶದಲ್ಲಿ ಹೋರಾಟದ ಬಗ್ಗೆ  ಚರ್ಚೆ ನಡೆಸಲಾಯಿತು.

  ಸಮರ್ಪಕ ವಿದ್ಯುತ್ ಪೂರೈಕೆ, ಕಬ್ಬಿಗೆ ಟನ್‌ಗೆ 2500 ರೂ. ಬೆಂಬಲ ಬೆಲೆ ಮುಂತಾದ ಬೇಡಿಕೆಗಳಿಗೆ ಒತ್ತಾಯಿಸಿ ಡಿ.9ರಂದು  ಸುವರ್ಣ ಸೌಧಕ್ಕೆ ಮುತ್ತಿಗೆಗೆ ಹಾಕಲು ಸಭೆಯಲ್ಲಿ ನಿರ್ಧರಿಸಲಾಯಿತು. ಆದರೆ ಸಭೆಯಲ್ಲಿ ಮುಖ್ಯವಾಗಿ ಗಮನಸೆಳೆದಿದ್ದು ಹಿರಿಯ ನಾಯಕರು ಶಾಸಕರಿಗೆ ಮಾಡಿದ ಪಾಠ.

ಮುರಳೀಧರ್ ರಾವ್, ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ಶಾಸಕರಿಗೆ ಪಾಠ ಮಾಡುತ್ತಾ, ಸಕ್ರಿಯವಾಗಿ ಎಲ್ಲಾ ಸದಸ್ಯರು ಕಲಾಪದಲ್ಲಿ ಭಾಗವಹಿಸಿ, ಅಧಿವೇಶನದಲ್ಲಿ ನಿಷ್ಕ್ರಿಯರಾಗಿ ಕೂರಬೇಡಿ. ಯಾವುದೇ ಸಮಸ್ಯೆಗಳಾದರೂ ಧ್ವನಿ ಎತ್ತಿ ಚರ್ಚಿಸಿ, ಸಮಸ್ಯೆಗಳನ್ನು ಹಿಡಿದು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿ ಎಂದು ಹೇಳಿದರು.
 

ವೆಬ್ದುನಿಯಾವನ್ನು ಓದಿ