ಮಸಣ ಸೇರಿದ ಮೂವರು ಬೈಕ್ ಸವಾರರು

ಶುಕ್ರವಾರ, 28 ಅಕ್ಟೋಬರ್ 2016 (10:48 IST)
ಬೆಂಗಳೂರು: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಮೃತಪಟ್ಟು, ಇಬ್ಬರು ಗಂಭೀರ ಗಾಯಗೊಂಡ ಘಟನೆ ಹೊಸಕೋಟೆ ಕೋಲಾರ ಹೆದ್ದಾರಿಯ ಚಿಕ್ಕನಹಳ್ಳಿ ಗೇಟ್ ಬಳಿ ತಡ ರಾತ್ರಿ ಸಂಭವಿಸಿದೆ.

ಬೆಂಗಳೂರಿನ ಕೆ.ಆರ್. ಪುರ ನಿವಾಸಿ ಬರ್ಕತ್(35), ಕೋಲಾರ ರಹಮತ್ ನಗರ ನಿವಾಸಿ ಕಲಿಂ(50), ದೇವನಹಳ್ಳಿ ತಾಲೂಕು ಹಂದರಹಳ್ಳಿ ನಿವಾಸಿ ರವೀಂದ್ರ(32) ಮೃತಪಟ್ಟ ಬೈಕ್ ಸವಾರರಾಗಿದ್ದಾರೆ. ಗಾಯಾಳುಗಳಾದ ರೋಹಿತ್ ಮತ್ತು ಚಾಂದ್ ಪಾಷ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ. 
 
ಎರಡು ಕಡೆಯಿಂದ ಎರಡೂ ಬೈಕ್ ಗಳು ಅತೀ ವೇಗವಾಗಿ ಚಲಿಸುತ್ತಿತ್ತು. ಗೇಟ್ ಬಳಿ ಇಬ್ಬರೂ ಸವಾರರಿಗೆ ತಮ್ಮ ಬೈಕ್ ಗಳನ್ನು ನಿಯಂತ್ರಿಸಿಕೊಳ್ಳಲಾಗದೆ ಪರಸ್ಪರ ಡಿಕ್ಕಿ ಹೊಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಪ್ರಕರಣ ಬೆಂಗಳೂರು ಗ್ರಾಮಾಂತರದ ನಂದಗುಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ