ಹೆಬ್ಬಾಳದಲ್ಲಿ ಮನೆ, ಮನೆಗೆ ತೆರಳಿ ಬಿಜೆಪಿ ಪ್ರಚಾರ, ಕಾಂಗ್ರೆಸ್ ಪ್ರಚಾರ ಕಾರ್ಯಕ್ಕೆ ಸಿಎಂ ಚಾಲನೆ

ಭಾನುವಾರ, 31 ಜನವರಿ 2016 (13:08 IST)
ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಭರ್ಜರಿ ಪ್ರಚಾರ ನಡೆಯುತ್ತಿದ್ದು,ನಾಗೇನಹಳ್ಳಿಯಲ್ಲಿ ಹೆಬ್ಬಾಳ ಅಭ್ಯರ್ಥಿ ರೆಹಮಾನ್ ಷರೀಫ್ ಪರವಾಗಿ ಸಿದ್ದರಾಮಯ್ಯ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡುವ ಮೂಲಕ ಹೆಬ್ಬಾಳ ಉಪಚುನಾವಣೆ ರಂಗೇರಿದೆ.  ಪರಮೇಶ್ವರ್, ಕೃಷ್ಣಭೈರೇಗೌಡ, ಮಾಜಿ ಸಂಸದ ನಾರಾಯಣ ಸ್ವಾಮಿ, ರೇವಣ್ಣ ಕೂಡ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಸೋನಿಯಾ ರಾಹುಲ್, ಸಿಎಂ, ನಾನು ಎಲ್ಲರೂ ಸೇರಿ ರೆಹಮಾನ್ ಅವರಿಗೆ ಟಿಕೆಟ್ ನೀಡಲು ಒಟ್ಟಿಗೆ ತೀರ್ಮಾನಿಸಿದೆವು. ಚುನಾವಣೆಯಲ್ಲಿ ರೆಹಮಾನ್ ಅವರಿಗೆ ಗೆಲುವು ನಿಶ್ಚಿತ ಎಂದು ಹೇಳಿದರು.

ಕಳೆದ ಬಾರಿ ಕೆಲವೇ ಮತಗಳ ಅಂತರದಿಂದ ರೆಹಮಾನ್ ಸೋತಿದ್ದರು. ಈ ಕ್ಷೇತ್ರದ ಜನರಿಗೆ ಒಬ್ಬ ಒಳ್ಳೆಯ ಯುವಕನನ್ನು ಆಯ್ಕೆ ಮಾಡುವ ಅವಕಾಶ ಜನರಿಗೆ ಬಂದಿದೆ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು.

ಹೆಬ್ಬಾಳ  ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ ಕೇಂದ್ರ ಸಚಿವ ಸದಾನಂದ ಗೌಡ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ಬಿಜೆಪಿ ನಾಯಕರೇ ದಂಡೇ ಪ್ರಚಾರದಲ್ಲಿ ನಿರತರಾಗಿದ್ದಾರೆ. ಸದಾನಂದ ಗೌಡರು  ಮನೆ, ಮನೆಗೆ ತೆರಳಿ ತಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡಿದರು. ಕೊಂಚ ಬಿಡುವು ಮಾಡಿಕೊಂಡು ಸ್ಥಳೀಯರ ಜತೆ ಬ್ಯಾಡ್ಮಿಂಟನ್ ಆಟವನ್ನು ಕೂಡ ಆಡಿದರು.

ವೆಬ್ದುನಿಯಾವನ್ನು ಓದಿ