ಕಾಂಗ್ರೆಸ್‌ನಿಂದ ತರಾಟೆ: ಕೆ.ಜಿ ಬೋಪಯ್ಯ ನೆರವಿಗೆ ಧಾವಿಸದ ಬಿಜೆಪಿ ಶಾಸಕರು

ಬುಧವಾರ, 23 ಮಾರ್ಚ್ 2016 (13:49 IST)
ಮಾಜಿ ಸಭಾಪತಿ ಕೆ.ಜಿ ಬೋಪಯ್ಯಗೆ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯಕ್ ತರಾಟೆಗೆ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ನಿಮ್ಮಕೃತ್ಯದಿಂದ ತೊಂದರೆಯಾಗಿರುವುದು ನನಗೆ ಎಂದು ಕಿಡಿಕಾರಿದರು
 
ನ್ಯಾಯಬದ್ಧವಾಗಿ ಗೆದ್ದು ಬಂದವರನ್ನು ಅಮಾನವೀಯವಾಗಿ ಅನರ್ಹಗೊಳಿಸಿದಿರಿ. ನಿಮ್ಮ ಕ್ರಮದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಹೋರಾಡಿ ಗೆದ್ದು ಬಂದವನು ನಾನು ಎಂದು ಕಾಂಗ್ರೆಸ್ ಶಾಸಕ ನರೇಂದ್ರ ಸ್ವಾಮಿ ಬೋಪಯ್ಯ ವಿರುದ್ಧ ವಾಗ್ದಾಳಿ ನಡೆಸಿದರು 
 
ಕಾಂಗ್ರೆಸ್ ಶಾಸಕರಾದ ನರೇಂದ್ರ ಸ್ವಾಮಿ ಮತ್ತು ಶಿವಮೂರ್ತಿ ನಾಯಕ್ ಬೋಪಯ್ಯ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರೂ ಬಿಜೆಪಿ ಸಾಸಕರು ಮೌನಕ್ಕೆ ಶರಣಾಗಿರುವುದು ಅಚ್ಚರಿ ಮೂಡಿಸಿತು.
 
ಬಿಜೆಪಿ ಶಾಸಕರು ಮೂಕ ಪ್ರೇಕ್ಷಕರಂತೆ ಕುಳಿತು ವೀಕ್ಷಿಸುತ್ತಿರುವುದು ಅಡಳಿತ ಪಕ್ಷದ ಸದಸ್ಯರಿಗೆ ಮತ್ತಷ್ಟು ಬಲವನ್ನು ತಂದುಕೊಟ್ಟಿತ್ತು. ಇದೇ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಕೊನೆಗೂ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ವೆಬ್ದುನಿಯಾವನ್ನು ಓದಿ