ಬಿಜೆಪಿ ನಾಯಕರು ನನ್ನನ್ನು ಹೀಯ್ಯಾಳಿಸಿದ್ದಾರೆ: ಕಾರ್ಪೋರೇಟರ್ ಚಂದ್ರಪ್ಪರೆಡ್ಡಿ

ಶನಿವಾರ, 29 ಆಗಸ್ಟ್ 2015 (20:07 IST)
ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದ ನಂತರ ನಾನೇ ಹಲವಾರು ಬಾರಿ ಬಿಜೆಪಿ ಕಚೇರಿಗೆ ಅಲೆದಿದ್ದೇನೆ. ಆದರೆ ನನ್ನನ್ನು ಕೇಳುವವರಾರು ಇರಲಿಲ್ಲ ಎಂದು ಕೋನೇನ್ ಅಗ್ರಹಾರದ ಕಾರ್ಪೋರೇಟರ್ ಚಂದ್ರಪ್ಪ ರೆಡ್ಡಿ ಹೇಳಿದ್ದಾರೆ. 
 
ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಹಲವಾರು ಬಾರಿ ಬಿಜೆಪಿ ಕಚೇರಿಗೆ ತೆರಳಿ ಮನವಿ ಮಾಡಿದಾಗ ಬಿಜೆಪಿಯ ಹಿರಿಯ ನಾಯಕರೇ ನನ್ನನ್ನು ಹೀಯ್ಯಾಳಿಸಿ ಕಳುಹಿಸಿದ್ದಾರೆ ಎಂದು ಆರೋಪಿಸಿದರು.
 
ಪಕ್ಷೇತರ ಕಾರ್ಪೋರೇಟರ್‌ಗಳು 10 ಕೋಟಿ ರೂಪಾಯಿಗಳನ್ನು ಕೇಳುತ್ತಿದ್ದಾರೆ ಎಂದು ರಾಜ್ಯದ ಬಿಜೆಪಿ ನಾಯಕರು ಹುಸಿ ಸುಳ್ಳು ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಮತದಾರರನ್ನು ತೃಪ್ತಿ ಪಡಿಸಲು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಪಕ್ಷೇತರ ಕಾರ್ಪೋರೇಟರ್ ಚಂದ್ರಪ್ಪ ರೆಡ್ಡಿ ಘೋಷಿಸಿದ್ದಾರೆ.

ವೆಬ್ದುನಿಯಾವನ್ನು ಓದಿ