ಅರ್ಜಿದಾರೆ, ಗಾಯಾಳು ಯುವತಿ ಲಿಷಾ ಅವರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅರ್ಜಿಯಲ್ಲಿ 1 ಕೋಟಿ ರೂ. ಪರಿಹಾರ ಹಾಗೂ ವಿಕಲಚೇತನ ಕೋಟಾದಡಿಯಲ್ಲಿ ಉದ್ಯೋಗ ನೀಡಬೇಕೆಂದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡರೂ ಕೂಡ ನಾಳೆಗೆ ಮುಂದೂಡಲಾಯಿತು.
ಅರ್ಜಿಯಲ್ಲೇನಿದೆ ?
ಯಾರೋ ಮಾಡಿದ ತಪ್ಪಿಗೆ ನಾನು ಸಿಲುಕಿ ಬಲಿಪಶುವಿನಂತಾಗಿದ್ದೇನೆ. ಆದ್ದರಿಂದ ನನ್ನ ಜೀವನ ಕಠೋರವಾಗಿದ್ದು, ಸರ್ಕಾರದ ವತಿಯಿಂದ 1 ಕೋಟಿ ರೂ. ಪರಿಹಾರ, ವಿಕಲಚೇತನ ಕೋಟಾದಡಿ ಸರ್ಕಾರಿ ಉದ್ಯೋಗ ಹಾಗೂ ಮುಂದಿನ ವೈದ್ಯಕೀಯ ವೆಚ್ಚವನ್ನೂ ಸರ್ಕಾರವೇ ಭರಿಸಬೇಕು ಎಂದು ಮನವಿ ಮಾಡಿರುವ ಯುವತಿ ಉಗ್ರರ ಅಟ್ಟಹಾಸಕ್ಕೆ ಬಲಿಪಶುಗಳಾಗಿ ನರಳುವಂತಹವರಿಗೆ ಸೂಕ್ತ ನ್ಯಾಯ ದೊರಕಿಸಿಕೊಡುವುದು ಅಗತ್ಯವಾಗಿದ್ದು, ರಾಷ್ಟ್ರೀಯ ನೀತಿಯನ್ನು ಜಾರಿಗೊಳಿಸಬೇಕು ಎಂದೂ ಕೂಡ ಮನವಿ ಮಾಡಿದ್ದಾಳೆ.