ಬಿಜೆಪಿಯಲ್ಲಿ ಹೆಚ್ಚು ಮಾನಗೆಟ್ಟವರಿರುವುದರಿಂದ ಅಧಿಕಾರಕ್ಕೆ ಬರಲ್ಲ : ಸಿಎಂ ಸಿದ್ದರಾಮಯ್ಯ

ಶನಿವಾರ, 6 ಫೆಬ್ರವರಿ 2016 (17:36 IST)
ಬಿಜೆಪಿಯಲ್ಲಿ ಹೆಚ್ಚು ಮಾನಗೆಟ್ಟವರಿರುವುದರಿಂದ ಮುಂದಿನ ಬಾರಿಯೂ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
 
ಮೈಸೂರಿನಲ್ಲಿ ಆಯೋಜಿಸಲಾದ ಗ್ರಾಮ ಸ್ವರಾಜ್ಯ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯವರಷ್ಟು ಸುಳ್ಳು ಹೇಳುವವರು ವಿಶ್ವದಲ್ಲಿಯೇ ಇಲ್ಲ. ಅವರು ರಾಜಕೀಯದಲ್ಲಿ ಇರೋಕೆ ಲಾಯಕ್ಕಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
 
50 ಲಕ್ಷ ರೂಪಾಯಿ ಬೆಲೆಬಾಳುವ ವಾಚ್ ಕನ್ನಡಕ ಹಾಕಿಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಟೀಕಿಸುತ್ತಾ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಿನ್ನೆಯೇ 50 ಸಾವಿರ ಕೊಟ್ಟರೆ ಮಾರಲು ಸಿದ್ದವಾಗಿದ್ದೇನೆ ಎಂದು ಹೇಳಿದ್ದೇನೆ ಎಂದರು.
 
ಪುತ್ರನಿಗೆ ಎಚ್‌ಡಿಕೆ 5 ಕೋಟಿ ರೂಪಾಯಿ ಕಾರು ಕೊಡಿಸಿದ್ದಾರೆ. ಆದರೆ, ನಾನು ಯಾವತ್ತೂ ಟೀಕಿಸಲಿಲ್ಲ. ಟೀಕಿಸುವುದಷ್ಟೆ ಅವರ ಕಾಯಕವಾಗಿದೆ ಎಂದು ಲೇವಡಿ ಮಾಡಿದರು.
 
ಬಿಜೆಪಿ ನಾಯಕರು ವಿಧಾನಸೌಧದಲ್ಲಿಯೇ ಬ್ಲ್ಯೂಫಿಲ್ಮ್ ನೋಡುತ್ತಾರೆ. ನನಗೆ ಆವತ್ತೇ ಗೊತ್ತಾಗಿದ್ದು ಬ್ಲ್ಯೂ-ಫಿಲ್ಮ್ ಅಂದರೆ ಏನೂಂತ ಎಂದು ಸಿಎಂ ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದರು.

ವೆಬ್ದುನಿಯಾವನ್ನು ಓದಿ