ಇದ್ದಕ್ಕಿದ್ದಂತೆ ಧಗಧಗ ಉರಿದು ಹೋದ ಬಿಎಂಟಿಸಿ ಬಸ್

ಗುರುವಾರ, 29 ಜನವರಿ 2015 (16:55 IST)
ಇಲ್ಲಿನ ಕೆಂಗೇರಿ ಬಸ್ ನಿಲ್ದಾಣದಿಂದ ಹೆಬ್ಬಾಳಕ್ಕೆ ತೆರಳುತ್ತಿದ್ದ ಮಹಾನಗರ ಸಾರಿಗೆ ಬಸ್ಸೊಂದು ಇದ್ದಕ್ಕಿದ್ದಂತೆ ಕ್ಷಣ ಮಾತ್ರದಲ್ಲಿ ಉರಿದು ಹೋದ ಘಟನೆ ನಗರದ ಲಗ್ಗೇರೆ ಬಳಿ ನಡೆದಿದೆ. 
 
ಚಾಲಕನ ಹೇಳಿಕೆ ಪ್ರಕಾರ, ಬಸ್‌ನ ಸ್ಟೇರಿಂಗ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ಚಾಲಕ ಬಸ್ ನಲ್ಲಿದ್ದ ಎಲ್ಲಾ ಪ್ರಯಾಣಿಕರಿಗೆ ಕೆಳಗಿಳಿಯುವಂತೆ ಸೂಚಿಸಿದ್ದಾನೆ. ಬಳಿಕ ಎಚ್ಚರಗೊಂಡ ಎಲ್ಲಾ ಪ್ರಯಾಣಿಕರೂ ಕೂಡ ಕೆಳಗಿಳಿಯುವ ಮೂಲಕ ಬಸ್ ನಲ್ಲಿದ್ದ ಎಲ್ಲರೂ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಗೆ ಕಾರಣವೇನೆಂಬುದು ತಿಳಿದು ಬಂದಿಲ್ಲ. 
 
ಲಗ್ಗೇರೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ