ಚನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿರುವ ಕಾಮಾಕ್ಯ ಥಿಯೇಟರ್ ಹಿಂಭಾಗದಲ್ಲಿರುವ ಆನಂದ್ ಗುರೂಜಿ ಮನೆ ಮುಂದೆ ಇಂದು ಬೆಳಿಗ್ಗೆ ರಟ್ಟಿನ ಪೆಟ್ಟಿಗೆಯೊಂದು ಪತ್ತೆಯಾಗಿತ್ತು. ಸುಮಾರು 7 ಗಂಟೆ ಸುಮಾರಿಗೆ ತಮ್ಮ ಶಿಷ್ಯಂದಿರಿಂದ ಈ ಕುರಿತು ಮಾಹಿತಿ ಪಡೆದ ಗುರೂಜಿ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಅದರಲ್ಲಿ ಆಟಂ ಬಾಂಬ್ ಇಟ್ಟಿರುವುದು ಬೆಳಕಿಗೆ ಬಂದಿದೆ. ಜತೆಗೆ ಗುರೂಜಿಯವರಿಗೆ ಬೆದರಿಕೆ ಪತ್ರವನ್ನು ಸಹ ಇರಿಸಲಾಗಿದೆ.
ಪತ್ರದಲ್ಲಿ ಹೀಗೆ ಬರೆದಿದೆ: "ಏ ಆನಂದ, ಇತ್ತೀಚಿಗೆ ಹಸುಗಳ ಬಗ್ಗೆ ಮಾತನಾಡುವುದನ್ನುಹೆಚ್ಚು ಮಾಡಿದ್ದಿಯಾ. ನಮ್ಮ ಆಹಾರ ಅದು. ಹೀಗೆ ಮುಂದುವರೆದರೆ ಪರಿಣಾಮ ನೆಟ್ಟಗಿರುವುದಿಲ್ಲ. ನಾವು ನಿಮ್ಮನ್ನು ಬಿಡುವುದಿಲ್ಲ. ಮುಗಿಸುತ್ತೇವೆ. ಈ ಹಿಂದೆ 14 ನೇ ತಾರೀಖಿಗೆ ಬಲಿ ನೀಡಬೇಕೆಂದು ಯೋಜಿಸಿದ್ದೆವು. ಇನ್ನು 15 ದಿನಗಳಲ್ಲಿ ಬಲಿ ನೀಡುವುದು ಖಚಿತ".