ಮೊದಲು ಅನಂತಮೂರ್ತಿ ಇದ್ದರು. ಈಗ ಮರುಳಸಿದ್ಧಪ್ಪ, ಬರಗೂರು ರಾಮಚಂದ್ರಪ್ಪ ಹಾಗೂ ಗೋವಿಂದ ರಾವ್ ಇದ್ದಾರೆ. ನಾವೆಲ್ಲ ಅವರಷ್ಟು ಬುದ್ಧಿಜೀವಿಗಳಲ್ಲ. ಈ ಹಿನ್ನೆಲೆಯಲ್ಲಿ ಮಾತನಾಡುವ ಅವಶ್ಯಕತೆ ಮುಖ್ಯಮಂತ್ರಿಗೆ ಇರದಿರಬಹುದು. ಇದೇ ಕಾರಣದಿಂದ ಗಡಿ ವಿವಾದವನ್ನು ಹಗುರವಾಗಿ ಪರಿಗಣಿಸಾಲಿಗಿದೆ ಎಂದು ಬೇಸರಿಸಿದರು.
ಮುಖ್ಯಮಂತ್ರಿಯವರು ಕಾನೂನು ನಮ್ಮ ಪರವಾಗಿದೆ, ಗೆಲವು ನಮ್ಮದೇ ಎನ್ನುತ್ತಾರೆ. ಆದರೆ ಗೆಲವು ನಮ್ಮದಾಗಲೂ ಕೋರ್ಟ್ನಲ್ಲಿ ವಾದ ಮಂಡಿಸಬೇಕಾಗುತ್ತದೆ. ಕರ್ನಾಟಕದ ಅಹವಾಲುಗಳನ್ನು ಕೋರ್ಟ್ಗೆ ಮನವರಿಕೆ ಮಾಡಿಕೊಡದೆ ಗೆಲವು ನಮ್ಮದು ಎಂದರೆ ಪ್ರಯೋಜನವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.