ಮದುವೆಯಾಗು ಎಂದಿದ್ದಕ್ಕೆ ಗರ್ಭಿಣಿಯನ್ನು ನದಿಗೆ ತಳ್ಳಿದ ಪ್ರಿಯತಮ

ಬುಧವಾರ, 10 ಸೆಪ್ಟಂಬರ್ 2014 (11:43 IST)
ಪ್ರೀತಿಸುವ ನಾಟಕವಾಡಿ ತಾನು ಗರ್ಭ ಧರಿಸುವಂತೆ ಮಾಡಿದ ಪ್ರಿಯತಮನ ಬಳಿ ಮದುವೆಯಾಗು ಎಂದು ಕೇಳಿದಕ್ಕೆ ಆತ ಆಕೆಯನ್ನು ನದಿಗೆ ತಳ್ಳಿದ ಘಟನೆ  ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.

ಅದೃಷ್ಟವಶಾತ್  ಪೀಡಿತ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ತಿಳಿದು ಬಂದಿದೆ.
 
ಸೋಮವಾರ ರಾತ್ರಿ ತಾಲ್ಲೂಕಿನ ಪುಳಿಕುಕ್ಕು ಗ್ರಾಮದಲ್ಲಿ ಘಟನೆ ನಡೆದಿದ್ದು, ಪ್ರಿಯಕರ ಆನಂದ್ ಎಂಬಾತ ನದಿಗೆ ತಳ್ಳಿದಾಗ 4 ಕೀಲೋಮೀಟರ್ ಈಜಿ ದಡ ಸೇರಿದ ಯುವತಿ ಮರದ  ಕೊಂಬೆಯೊಂದನ್ನು ಹಿಡಿದುಕೊಂಡು ಈಡೀ ರಾತ್ರಿಯನ್ನು ಕಳೆದಿದ್ದಾಳೆ. ಮಂಗಳವಾರ ಬೆಳಿಗ್ಗೆ ಆಕೆಯನ್ನು ರಕ್ಷಿಸಲಾಗಿದ್ದು, ಪರಾರಿಯಾಗಿದ್ದ  ಆರೋಪಿಯನ್ನು ಇಂದು ಬಂಧಿಸಲಾಗಿದೆ.

ವೆಬ್ದುನಿಯಾವನ್ನು ಓದಿ