ಪ್ರಚಾರಕ್ಕೆ ಬಂದಿದ್ದೀನಾ? ವಿಜಯೋತ್ಸವಕ್ಕೆ ಬಂದಿದ್ದೀನಾ ಎನ್ನುವುದೇ ಡೌಟು: ಬಿಎಸ್ ಯಡಿಯೂರಪ್ಪ

ಸೋಮವಾರ, 13 ಮಾರ್ಚ್ 2017 (10:28 IST)
ಮೈಸೂರು:  ನಾನಿಲ್ಲಿಗೆ ಚುನಾವಣಾ ಪ್ರಚಾರಕ್ಕೆ ಬಂದಿದ್ದೀನಾ ವಿಜಯೋತ್ಸವಕ್ಕೆ ಬಂದಿದ್ದೀನಾ ಎಂದು ಡೌಟ್ ಆಗ್ತಿದೆ. ಜನರನ್ನು ನೋಡಿದ್ರೆ ನಾನು ವಿಜಯೋತ್ಸವಕ್ಕೆ ಬಂದ ಹಾಗನಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

 
ಮೈಸೂರಿನ ನಂಜನಗೂಡಿನಲ್ಲಿ ಉಪ ಚುನಾವಣೆಗೆ ಪ್ರಚಾರಕ್ಕಾಗಿ ಬಂದಿದ್ದ ಅವರು ಈ ಹೇಳಿಕೆ ನೀಡಿದ್ದಾರೆ. ಜನರ ಉತ್ಸಾಹ ನೋಡಿದರೆ ನಾವು ಪ್ರಚಾರ ಮಾಡುವ ಅಗತ್ಯವೇ ಇಲ್ಲ ಎನಿಸುತ್ತದೆ. ಅವರೇ ಸ್ವಯಂ ಪ್ರೇರಿತರಾಗಿ ಬಿಜೆಪಿಗೆ ಮತ ಹಾಕ್ತಾರೆ ಎಂದು ಯಡಿಯೂರಪ್ಪ ಹೇಳಿಕೊಂಡಿದ್ದಾರೆ.

ಇದೇ ವೇಳೆ ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಂತರ ಕರ್ನಾಟಕದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ. ಹಾಗಾಗಿ ಹತಾಶೆಯಿಂದ ಮಾತನಾಡುತ್ತಿದ್ದಾರೆ ಎಂದು ಅವರು ಟಾಂಗ್ ಕೊಟ್ಟಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ