ಬುಲೆಟ್ ಪ್ರಕಾಶ್‌ಗೆ ಜೀವಬೆದರಿಕೆ ಹಾಕಿದ ದಿನಕರ್ ತೂಗುದೀಪ್?

ಗುರುವಾರ, 4 ಫೆಬ್ರವರಿ 2016 (10:58 IST)
ನಟ ದರ್ಶನ್ ಸಹೋದರ, ನಿರ್ದೇಶಕ ದಿನಕರ್ ತೂಗುದೀಪ್ ಅವರ ವಿರುದ್ಧ  ಹಾಸ್ಯ ನಟ ಹಾಸ್ಯ ನಟ ಬುಲೆಟ್ ಪ್ರಕಾಶ್  ದೂರು ನೀಡಿದ್ದಾರೆ. 

ನಿನ್ನೆ ರಾತ್ರಿ ಕೆಂಪಾಪುರ ಬಳಿಯ ರಾಜನ್ ಸ್ಟುಡಿಯೋ ಬಳಿ ದಿನಕರ್ ತಮಗೆ ಜೀವ ಬೆದರಿಕೆ ಹಾಕಿದ್ದಾರೆ, ಅವರ ಸಹಚರರಾದ ಪಿಸ್ತಾ ಸೀನು ಹಲ್ಲೆ ನಡೆಸಿದ್ದಾರೆ ಎಂದು ಬೆಂಗಳೂರಿನ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಬುಲೆಟ್ ದೂರು ದಾಖಲಿಸಿದ್ದಾರೆ. 
 
ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಸಿನಿಮಾ ಸೆಟ್‍ನಲ್ಲಿ ದಿನಕರ್ ತೂಗುದೀಪ ಬುಲೆಟ್ ಪ್ರಕಾಶ್ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದರಂತೆ. 
ದರ್ಶನ್ ಹಾಕಿಕೊಂಡು ಬುಲೆಟ್ ಪ್ರಕಾಶ್ ಹೇಗೆ ಸಿನಿಮಾ ಮಾಡುತ್ತಾರೆ ಎಂದು ಆವಾಜ್ ಹಾಕಿದ್ದರಂತೆ.ನಿನ್ನೆ ಈ ವಿಷಯ ತಿಳಿದ ನಾನು ದಿನಕರ್ ಅವರಿಗೆ ಕರೆ ಮಾಡಿ ಯಾಕೆ ಹೀಗೆ ಹೇಳಿದಿರಿ ಎಂದು ಕೇಳಿದೆ. ಅದಕ್ಕವರು ಅವರು ಬಾಯಿಗೆ ಬಂದಂತೆ ನನ್ನನ್ನು ಬೈದಿದ್ದಾರೆ. ಮರುದಿನ  ರಾಜನ್ ಸ್ಟುಡಿಯೋ ಬಳಿ ಭೇಟಿಯಾಗಿ  ಜೀವಬೆದರಿಕೆ ಹಾಕಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರ ಸಹಚರ  ಸಹಚರರಾದ ಪಿಸ್ತಾ ಸೀನು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಪ್ರತಿಯಾಗಿ ನಾನು ಕೂಡ ಒಂದೇಟು ಕೊಟ್ಟಿದ್ದೇನೆ ಎಂದು ಬುಲೆಟ್ ದೂರಿದ್ದಾರೆ.
 
ಘಟನೆಯ ಬಳಿಕವೂ ನನಗೆ ಹಲವಾರು ಬೆದರಿಕೆ ಕರೆಗಳು ಬಂದಿವೆ. ನನ್ನ ಹಾಗೂ ನನ್ನ ಕುಟುಂಬಕ್ಕೆ ಯಾವುದೇ ಹಾನಿಯಾದರೆ ಅದಕ್ಕೆ ದಿನಕರ್ ತೂಗುದೀಪ್ ಮತ್ತು ಅವರ ಸಹಚರರೇ ಕಾರಣರಾಗುತ್ತಾರೆ ಎಂದು ಬುಲೆಟ್ ಪ್ರಕಾಶ್ ಗಂಭೀರ ಆರೋಪ ಮಾಡಿದ್ದಾರೆ.
 
ಈ ಆರೋಪವನ್ನು ನಿರಾಕರಿಸಿರುವ ದಿನಕರ್ ತೂಗುದೀಪ್ ನಾನು ಯಾವುದೇ ರೀತಿಯ ಬೆದರಿಕೆ ಹಾಕಿಲ್ಲ. ಹಲ್ಲೆ ಕೂಡ ನಡೆದಿಲ್ಲ ಎಂದಿದ್ದಾರೆ. 

ವೆಬ್ದುನಿಯಾವನ್ನು ಓದಿ