ನಗರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆಯ ಘಟನೆಯಲ್ಲಿ ನನಗೆ ಏನೂ ಆಗಲಿಲ್ಲ. ದೇವಿ ಚಾಮುಂಡೇಶ್ವರಿ ದಯೆ ನನ್ನ ಮೇಲಿದ್ದ ಕಾರಣ ನಾನು ಚೆನ್ನಾಗಿಯೇ ಇದ್ದೇನೆ ಎಂದ ಅವರು, ಚಿತ್ರೀಕರಣ ವೇಳೆಯಲ್ಲಿ ಇಂತಹ ಘಟನೆಗಳು ನಡೆಯುವುದು ಸಹಜ. ಅಲ್ಲದೆ ಈ ಹಿಂದೆಯೇ ನಾನು ಅಪಘಾತಕ್ಕೀಡಾಗಿದ್ದೆ. ಆದರೆ ಆ ವೇಳೆ ನಾನು ಮೃತಪಟ್ಟಿದ್ದೇನೆ ಎಂದು ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದವು ಎಂದು ನೆನೆದು ಕಣ್ಣಿನಲ್ಲಿ ಭಾವೋದ್ವೇಗದ ನೀರನ್ನು ಹರಿಸಿದರು.
ಕಾರಣವೇನು?
ನಿನ್ನೆ ಭುಜಂಗ ಚಿತ್ರದ ಚಿತ್ರೀಕರಣವು ಮೈಸೂರಿನ ವರುಣದಲ್ಲಿ ನಡೆಯುತ್ತಿದ್ದಾಗ ಸಾಹಸ ದೃಶ್ಯವನ್ನು ಸೆರೆ ಹಿಡಿಯಲಾಗುತ್ತಿತ್ತು. ಈ ವೇಳೆ ದ್ವಿಚಕ್ರ ವಾಹನಕ್ಕೆ ಕಟ್ಟಿದ್ದ ಹಗ್ಗವು ತುಂಡಾದ ಪರಿಣಾಮ ನಟನಾನಿತರ ಹಾಸ್ಯನಟ ಬುಲೆಟ್ ಪ್ರಕಾಶ್ ಕೆಳಬೀಳುತ್ತಿದ್ದರು. ಇದನ್ನು ಕಂಡ ಇತರೆ ಸಿಬ್ಬಂಧಿಗಳು ಅವರನ್ನು ರಕ್ಷಿಸಿದ್ದರು. ಆದರೂ ಈ ವೇಳೆ ಸ್ವಲ್ಪ ಪ್ರಮಾಣದ ಗಾಯಗಳಿಗೆ ತುತ್ತಾಗಿದ್ದ ಬುಲೆಟ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಹಿಂದಿನ ಘಟನೆಯನ್ನು ನೆನದು ಕಣ್ಣೀರಿಟ್ಟರು.