ಹಿಂದಿನ ಘಟನೆ ನೆನೆದು ಸಾರ್ವಜನಿಕವಾಗಿ ಕಣ್ಣೀರಿಟ್ಟ ಬುಲೆಟ್ ಪ್ರಕಾಶ್

ಬುಧವಾರ, 27 ಮೇ 2015 (13:32 IST)
ನಿನ್ನೆ ಚಿತ್ರೀಕರಣ ವೇಳೆಯಲ್ಲಿ ಹಗ್ಗ ತುಂಡಾಗಿ ಕೆಳ ಬಿದ್ದಿದ್ದ ಘಟನೆ ನಡೆದ ಹಿನ್ನೆಲೆಯಲ್ಲಿ ಸ್ಯಾಂಡಲ್‌ವುಡ್ ಚಿತ್ರರಂಗದ ಹಾಸ್ಯನಟ ಬುಲೆಟ್ ಪ್ರಕಾಶ್ ಅವರು ಇಂದು ಪ್ರತಿಕ್ರಿಯಿಸಿದ್ದು, ಹಿಂದಿನ ಘಟನೆಯೊಂದನ್ನು ನೆನೆದು ಕಣ್ಣೀರಿಟ್ಟಿದ್ದಾರೆ. 
 
ನಗರದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆಯ ಘಟನೆಯಲ್ಲಿ ನನಗೆ ಏನೂ ಆಗಲಿಲ್ಲ. ದೇವಿ ಚಾಮುಂಡೇಶ್ವರಿ ದಯೆ ನನ್ನ ಮೇಲಿದ್ದ ಕಾರಣ ನಾನು ಚೆನ್ನಾಗಿಯೇ ಇದ್ದೇನೆ ಎಂದ ಅವರು, ಚಿತ್ರೀಕರಣ ವೇಳೆಯಲ್ಲಿ ಇಂತಹ ಘಟನೆಗಳು ನಡೆಯುವುದು ಸಹಜ. ಅಲ್ಲದೆ ಈ ಹಿಂದೆಯೇ ನಾನು ಅಪಘಾತಕ್ಕೀಡಾಗಿದ್ದೆ. ಆದರೆ ಆ ವೇಳೆ ನಾನು ಮೃತಪಟ್ಟಿದ್ದೇನೆ ಎಂದು ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದವು ಎಂದು ನೆನೆದು ಕಣ್ಣಿನಲ್ಲಿ ಭಾವೋದ್ವೇಗದ ನೀರನ್ನು ಹರಿಸಿದರು.
 
ಕಾರಣವೇನು?
ನಿನ್ನೆ ಭುಜಂಗ ಚಿತ್ರದ ಚಿತ್ರೀಕರಣವು ಮೈಸೂರಿನ ವರುಣದಲ್ಲಿ ನಡೆಯುತ್ತಿದ್ದಾಗ ಸಾಹಸ ದೃಶ್ಯವನ್ನು ಸೆರೆ ಹಿಡಿಯಲಾಗುತ್ತಿತ್ತು. ಈ ವೇಳೆ ದ್ವಿಚಕ್ರ ವಾಹನಕ್ಕೆ ಕಟ್ಟಿದ್ದ ಹಗ್ಗವು ತುಂಡಾದ ಪರಿಣಾಮ ನಟನಾನಿತರ ಹಾಸ್ಯನಟ ಬುಲೆಟ್ ಪ್ರಕಾಶ್ ಕೆಳಬೀಳುತ್ತಿದ್ದರು. ಇದನ್ನು ಕಂಡ ಇತರೆ ಸಿಬ್ಬಂಧಿಗಳು ಅವರನ್ನು ರಕ್ಷಿಸಿದ್ದರು. ಆದರೂ ಈ ವೇಳೆ ಸ್ವಲ್ಪ ಪ್ರಮಾಣದ ಗಾಯಗಳಿಗೆ ತುತ್ತಾಗಿದ್ದ ಬುಲೆಟ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, ಹಿಂದಿನ ಘಟನೆಯನ್ನು ನೆನದು ಕಣ್ಣೀರಿಟ್ಟರು. 

ವೆಬ್ದುನಿಯಾವನ್ನು ಓದಿ