ಹಿನ್ನೆಲೆ: ಪ್ರಕರಣದ ಎಸ್ಪಿಪಿ ಹುದ್ದೆಗೆ ಖುದ್ದು ತಮಿಳುನಾಡು ಸರ್ಕಾರವೇ ವಕೀಲ ಭವಾನಿ ಸಿಂಗ್ ಅವರನ್ನು ನೇಮಿಸಿತ್ತು. ಆದರೆ ಈ ನಿಯಮ ಸರಿಯಲ್ಲ. ಎಸ್ಪಿಪಿ ಅವರನ್ನು ಬದಲಿಸಬೇಕು ಎಂದು ಒತ್ತಾಯಿಸಿ ಪ್ರಕರಣದ ಫಿರ್ಯಾದುದಾರ, ಡಿಎಂಕೆ ನಾಯಕ ಅನ್ಬಳಗನ್ ಅವರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ನಿನ್ನೆ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಪ್ರಕರಣವು ಕರ್ನಾಟಕ ಸರ್ಕಾರ ಅಥವಾ ಹೈಕೋರ್ಟ್ಗೆ ಸಂಬಂಧಿಸಿರುವುದಾಗಿದ್ದು, ಈ ಸಂಬಂಧ ಕರ್ನಾಟಕ ಸರ್ಕಾರವೇ ತೀರ್ಮಾನ ಕೈಗೊಳ್ಳಬೇಕಿದೆ. ತಮಿಳುನಾಡು ಸರ್ಕಾರದ ನಡೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೆ ಭವಾನಿ ಸಿಂಗ್ ಅವರ ನೇಮಕವನ್ನು ಅಸಿಂಧುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರವು ಬಿ.ವಿ.ಆಚಾರ್ಯ ಅವರನ್ನು ಎಸ್ಪಿಪಿಯನ್ನಾಗಿ ನೇಮಿಸಿದೆ.