ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾಕ್ಕೆ ಸಂಬಂಧಿಸಿದಂತೆ ಬದಲಿ ನ್ಯಾಯಪೀಠಕ್ಕೆ ಹೋಗಿ ಎಂದು ರಾಜ್ಯ ಸರಕಾರಕ್ಕೆ ಸಲಹೆ ನೀಡಿದ್ದೆ. ಆದರೆ, ಅವರು ನಮ್ಮ ಸಲಹೆಯನ್ನು ಪರಿಗಣಿಸಲಿಲ್ಲ. ಈಗ ಸಾಂವಿಧಾನಿಕ ಪೀಠದ ಮುಂದೆ ಹೋಗುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಇದೀಗ ನ್ಯಾಯಲಯದ ಆದೇಶ ಪಾಲಿಸಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾವೇರಿ ವಿಚಾರದಲ್ಲಿ ಇಂದು ಸುಪ್ರೀಂಕೋರ್ಟ್ ನೀಡಿರುವ ಆದೇಶ ಆಘಾತ ತಂದಿದೆ. ಆದರೆ, ಕರ್ನಾಟಕ ಪರ ವಕೀಲ ನಾರಿಮನ್ ನಿಲುವು ಏನು ಎನ್ನುವುದು ಗೊತ್ತಾಗಲಿಲ್ಲ. ರಾಜ್ಯ ಸರಕಾರ ಮೊದಲೇ ಸಾಂವಿಧಾನಿಕ ಪೀಠದ ಎದುರು ಹೋಗಿದ್ದರೆ ಈ ಗಂಡಾಂತರದಿಂದ ಪಾರಾಗಬೇಕಿತ್ತು ಎಂದು ಹೇಳಿದರು.