ಕೊನೆಗೆ ಎಸಿಪಿ ಪ್ರಸನ್ನ ಬೆಂಗಳೂರಿಗೆ ಕರೆ ಮಾಡಿ ಅಲ್ಲಿನ ಪೊಲೀಸ್ ಅಧಿಕಾರಿಗಳು ತಿರುವಳ್ಳೂರು ಪೊಲೀಸರಿಗೆ ಮನದಟ್ಟು ಮಾಡಿದ ನಂತರ ಬೆಂಗಳೂರಿನಿಂದ ಮಫ್ತಿಯಲ್ಲಿ ಬಂದಿದ್ದ ಪೊಲೀಸರನ್ನು ಬಿಡಿಸಲಾಯಿತು ಮತ್ತು ತಿರುವಳ್ಳೂರು ಪೊಲೀಸರ ನೆರವಿನೊಂದಿಗೆ ಬಾಂಬ್ ಸ್ಫೋಟದ ಆರೋಪಿಗಳನ್ನು ಸೆರೆಹಿಡಿದು ಬೆಂಗಳೂರಿಗೆ ತರಲಾಯಿತು.