ಹೌದು, ಬೆಂಗಳೂರು ಮೂಲದ ನಿವಾಸಿ ಇಳವರಸನ್ ಎಂಬ ವ್ಯಕ್ತಿ ಕಳೆದ ಜುಲೈ 22ರಂದು ಅಪಘಾತಕ್ಕೀಡಾಗಿದ್ದ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಈತನ ಮೆದುಳು ನಿಷ್ಕ್ರಿಯವಾಗಿತ್ತು. ಆದದ್ದರಿಂದ ನಗರದ ಸಾಗರ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಆಸ್ಪತ್ರೆಯ ವೈದ್ಯರು, ಈತನನ್ನು ಉಳಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾವನ್ನಪ್ಪಿ ಮಣ್ಣಿನಲ್ಲಿ ಮಣ್ಣಾಗುವ ಬದಲು ಬದುಕಿರುವಾಗಲೇ ಹದೇಹದ ಅಂಗಾಗಗಳನ್ನು ದಾನ ಮಾಡುವುದು ಉತ್ತ ಎಂದು ಯೋಚಿಸಿ ದಾನಕ್ಕೆ ಮುಂದಾಗಿದ್ದಾರೆ.
ನಗರದ ಬನ್ನೇರುಘಟ್ಟ ಸಾಗರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇಳವರಸನ್ ದೇಹದ ಅಂಗಾಗಗಳನ್ನು ಅಲ್ಲಿಯೇ ಬೇರ್ಪಡಿಸಲಾಗುತ್ತಿದ್ದು, ಒಂದು ಕಿಡ್ನಿಯನ್ನು ಸಾಗರ್ ಹಾಗೂ ಮತ್ತೊಂದು ಕಿಡ್ನಿಯನ್ನು ವಿಕ್ಟೋರಿಯಾ ಆಸ್ಪತ್ರೆಗ ನೀಡಲಾಗಿದೆ. ಇನ್ನು ಬಿಜಿಎಸ್ ಆಸ್ಪತ್ರೆಗೆ ಲಿವರ್ ಮತ್ತು ಲಯನ್ಸ್ ಕ್ಲಬ್ಗೆ ಎರಡೂ ಕಣ್ಣುಗಳನ್ನು ದಾನ ಮಾಡಲಾಗಿದೆ.