.ಕೆಪಿಸಿಸಿ ಕಚೇರಿಯಲ್ಲಿ ಏಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್, ಕಾರ್ಯದರ್ಶಿಗಳಾದ ಚೆಲ್ಲಾ ಕುಮಾರ್ ಮತ್ತು ಶಾಂತಾಕುಮಾರ್ ಶಾಸಕರ ದೂರುಗಳನ್ನು ಸ್ವೀಕರಿಸಿದರು. ಮುಖ್ಯಮಂತ್ರಿಗಳ ಸುತ್ತ ಭಟ್ಟಂಗಿಗಳ ಪಡೆ ಸುತ್ತುವರಿದಿದ್ದು, ಪಕ್ಷದ ನಿಷ್ಠರಿಂದ ಅವರನ್ನು ದೂರವಿರಿಸುತ್ತಿದೆ ಎಂದು ಶಾಸಕರು ಆರೋಪಿಸಿದರು.
ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಪಕ್ಷವು ಪಂಚಾಯತ್ ಚುನಾವಣೆಯಲ್ಲಿ ಗೆಲವು ಗಳಿಸದೇ ಇರಬಹುದು ಎಂದು ಭಯ ವ್ಯಕ್ತಪಡಿಸಿದರು. ಅಭಿವೃದ್ಧಿ ಅನುದಾನ ಬಿಡುಗಡೆಯಲ್ಲಿ ವಿಳಂಬ, ಅಧಿಕಾರಿಗಳ ವರ್ಗಾವಣೆಯಲ್ಲಿ ಸಚಿವರ ಅಸಹಕಾರ, ಬಡವರಿಗೆ ಮನೆ ಮಂಜೂರಾತಿಯಲ್ಲಿ ಗೊಂದಲ ಮುಂತಾದ ವಿಷಯಗಳನ್ನು ಶಾಸಕರು ಪ್ರಸ್ತಾಪಿಸಿದರು.