ತುಮಕೂರಿನಲ್ಲಿ ಬಾಲ್ಯವಿವಾಹ: 6 ಜನರ ವಿರುದ್ಧ ದೂರು ದಾಖಲು

ಶುಕ್ರವಾರ, 17 ಏಪ್ರಿಲ್ 2015 (11:35 IST)
ತುಮಕೂರಿನಲ್ಲಿ ಅಪ್ರಾಪ್ತೆಯ ವಿವಾಹ ನಡೆಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ 6 ಜನರ ವಿರುದ್ಧ ದೂರು ದಾಖಲಾಗಿದೆ. ರಾಜೀವ್ ಗಾಂಧಿ ಬಡಾವಣೆ ನಿವಾಸಿಗಳಾದ ವರನ ಕಡೆಯವರು ಮತ್ತು ಬಾಲಕಿಯ ಕುಟುಂಬದವರ ಮೇಲೆ ದೂರು ದಾಖಲಾಗಿದೆ. 

ನಗರದ ತಿಲಕ್ ಪಾರ್ಕ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ತರಾತುರಿಯಲ್ಲಿ  ಮದುವೆ ನಡೆಸಿದ ಆರೋಪಿಗಳು ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ಮದುವೆ ನಡೆದ ಪ್ಯಾಲೇಸ್ ವ್ಯವಸ್ಥಾಪಕರ ವಿರುದ್ಧವು ಕೂಡ ದೂರು ದಾಖಲಾಗಿದೆ.  
 
ಬಾಲಕಿ ಮದುವೆ ನಡೆಯುತ್ತಿರುವುದರ ಕುರಿತು ಸಿಡಿಪಿಓ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ದಾಖಲಾದ ಸುದ್ದಿ ತಿಳಿದ ವರ ಮತ್ತು ವಧುವಿನ ಕಡೆ ಪೋಷಕರು ಸ್ಥಳದಿಂದ ಪರಾರಿಯಾಗಿದ್ದಾರೆ.   
 
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. 

ವೆಬ್ದುನಿಯಾವನ್ನು ಓದಿ