ನುಡಿದಂತೆ ನಡೆದ ಸಿಎಂ: ಜಾರಕಿಹೊಳಿಗೆ ಕೈಗಾರಿಕಾ ಖಾತೆ...?!

ಗುರುವಾರ, 26 ಫೆಬ್ರವರಿ 2015 (16:54 IST)
ಖಾತೆ ಬದಲಾವಣೆ ಮಾಡಬೇಕೆಂದು ಅಬಕಾರಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ಸಚಿವ ಸತೀಶ್ ಜಾರಕಿಹೊಳಿಗೆ ಸಿಎಂ ಸಿದ್ದರಾಮಯ್ಯನವರು ಇಂದು ತಮ್ಮ ಬಳಿ ಇದ್ದ ಸಣ್ಣ ಕೈಗಾರಿಕಾ ಖಾತೆಯನ್ನು ಬಿಟ್ಟುಕೊಟ್ಟಿದ್ದು, ಅಬಕಾರಿ ಖಾತೆಯನ್ನು ಹಿಂಪಡೆದಿದ್ದಾರೆ. 
 
ಮೂಲಗಳ ಪ್ರಕಾರ, ಜಾರಕಿಹೊಳಿ ಅವರ ಬೇಡಿಕೆಯಂತೆ ಸಿಎಂ ಸಿದ್ದರಾಮಯ್ಯನವರು ಇಂದು ಸತೀಶ್ ಜಾರಕಿಹೊಳಿ ಅವರ ಬಳಿ ಇದ್ದ ಅಬಕಾರಿ ಖಾತೆಯನ್ನು ಬೆಡಿಕೆ ಇರುವ ಹಿನ್ನೆಲೆಯಲ್ಲಿ ಹಿಂಪಡೆದಿದ್ದು,,  ಅವರಿಗೆ ತಮ್ಮ ಬಳಿ ಇಧ್ದ ಸಣ್ಣ ಕೈಗಾರಿಕೆ ಖಾತೆಯನ್ನು ನೀಡಿದ್ದಾರೆ ಎನ್ನಲಾಗಿದೆ. 
 
ಇನ್ನು ಖಾತೆ ಬದಲಾವಣೆ ಮಾಡಿ ಎಂದು ರಾಜೀನಾಮೆ ಮೂಲಕ ಮುನಿಸು ತೋರಿಸಿದ್ದ ಜಾರಕಿಹೊಳಿ ಅವರಿಗೆ ಈ ಹಿಂದೆ ಸಿಎಂ ಸಿದ್ದರಾಮಯ್ಯನವರು ಸಂಪುಟ ವಿಸ್ತರಣೆ ವೇಳೆಯಲ್ಲಿ ಬೇರೆ ಖಾತೆಯನ್ನು ಹಂಚಿಕೆ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ ಇಂದು ಖಾತೆ ಬದಲಾವಣೆ ಮಾಡಿಕೊಡಲಾಗಿದೆ. 

ವೆಬ್ದುನಿಯಾವನ್ನು ಓದಿ