ಸಿದ್ದು ನಿದ್ದೆಯಿಂದ ಎದ್ದು ಉತ್ತರಿಸಲಿ - ಆಯನೂರು ಮಂಜುನಾಥ್

ಶನಿವಾರ, 25 ಫೆಬ್ರವರಿ 2017 (15:24 IST)
ಹೈ ಕಮಾಂಡ್‌ಗೆ ಕಪ್ಪ ನೀಡಿದ ದಾಖಲೆ ಇರುವ ಡೈರಿ ಬಿಡುಗಡೆಗೆ ಸಂಬಂಧಿಸಿದಂತೆ ಮೌನಕ್ಕೆ ಜಾರಿರುವ ಸಿಎಂ ಸಿದ್ದರಾಮಯ್ಯನವರಿಗೆ ಟಾಂಗ್ ನೀಡಿರುವ ಬಿಜೆಪಿಯ ಮಾಜಿ ರಾಜ್ಯಸಭಾ ಸಂಸದ ಆಯನೂರು ಮಂಜುನಾಥ್, ಸಿಎಂ ಸಿದ್ದರಾಮಯ್ಯ ಕಾಣೆಯಾಗಿಲ್ಲ. ಬದಲಾಗಿ ನಿದ್ರೆಗೆ ಜಾರಿದ್ದಾರೆ. ಇಂದಲ್ಲ ನಾಳೆ ಬರಲೇಬೇಕು. ಬಂದ ಮೇಲೆ ಉತ್ತರ ನೀಡಲಿ ಎಂದಿದ್ದಾರೆ.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಡೈರಿ ಸಿಕ್ಕಿರುವುದು ಸತ್ಯ. ಅಪಾರ ಪ್ರಮಾಣದ ಹಣ ಸಂದಾಯವಾಗಿರುವ ಬಗ್ಗೆ ಅದರಲ್ಲಿ ಉಲ್ಲೇಖಿಸಿರುವುದರಿಂದ ಬೇರೆ ಬೇರೆ ಇಲಾಖೆಗಳು ಈ ಕುರಿತು ತನಿಖೆ ನಡೆಸಬಹುದು.  ಬಿಜೆಪಿ ನಾಯಕರು ಸುಳ್ಳು ಆರೋಪ ಮಾಡಿದ್ದಾರೆ ಎಂದು ಆರೋಪಿಸಿ ಕೈ ನಾಯಕರು'ಸತ್ಯಮೇವ ಜಯತೇ' ಹೆಸರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಈಗ ಸತ್ಯಕ್ಕೆ ಜಯವಾಗಿದೆ ಎಂದು ಕಿಚಾಯಿಸಿದ್ದಾರೆ. 
 
ಬಿಎಸ್‌ವೈ ಕುರಿತು ಸಿಎಂ ಸಿದ್ದರಾಮಯ್ಯ ಹಾಗೂ ದಿನೇಶ್‌ ಗುಂಡೂರಾವ್‌ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಂಜುನಾಥ್, ಒಬ್ಬ ಸಂಸದನ ಕುರಿತುವ ಈ ರೀತಿ ಹೇಳಿಕೆ ನೀಡಿರುವ ಸಿಎಂ ಹಾಗೂ ದಿನೇಶ್‌ ಗುಂಡೂರಾವ್‌ ಇಬ್ಬರೂ ತಮ್ನ ಸ್ಥಾನಕ್ಕೆ ಅನರ್ಹರು ಎಂದಿದ್ದಾರೆ. 
 
 ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಒಬ್ಬ ಮಾನಸಿಕ ಅಸ್ವಸ್ಥ. ಮಾನಸಿಕ ಆರೋಗ್ಯ ಪರೀಕ್ಷಿಸುವಂತೆ ಈ ಮೊದಲೇ ಅವರಿಗೆ ಸಲಹೆ ನೀಡಿದ್ದೆ. ಆದರೆ ಈಗ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿರುವುದು ಸಂಪೂರ್ಣ ಸಾಬೀತಾಗಿದೆ. ಅವರು ಉಗಾಂಡದ ಸರ್ವಾಧಿಕಾರಿ ಈದಿ ಹಮೀದ್ ರೀತಿ ವರ್ತಿಸುತ್ತಿದ್ದಾರೆ. ಹುಚ್ಚು ಹುಚ್ಚಾಗಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರ ಹೇಳಿಕೆಗಳನ್ನು ನೋಡಿದರೆ ಮಾನಸಿಕ ಆರೋಗ್ಯ ಸರಿಯಿಲ್ಲ ಎನ್ನುವುದು ಪ್ರೂವ್ ಆಗುತ್ತದೆ ಎಂದು ದಿನೇಶ್ ಗುಂಡೂರಾವ್ ಯಡಿಯೂರಪ್ಪ ವಿರುದ್ಧ  ಈ ಹಿಂದೆ ವಾಗ್ದಾಳಿ ನಡೆಸಿದ್ದರು.

ವೆಬ್ದುನಿಯಾವನ್ನು ಓದಿ