ಡಾ. ರಾಜ್ ಬಗ್ಗೆ ನನಗೆ ಹೆಮ್ಮೆ , ಗೌರವ. ಒಂದು ಅವರೊಬ್ಬರು ಮೇರುನಟ ಎನ್ನುವುದರ ಜೊತೆ ನಮ್ಮ ಜಿಲ್ಲೆಯವರು. ಅವರ ವಿನಯವಂತಿಕೆ, ವಿನಮ್ರತೆ ಎಲ್ಲವೂ ಸೂಜಿಗಲ್ಲಿನಂತೆ ಆಕರ್ಷಿಸಿತು. ಹೀಗಾಗಿ ಎಲ್ಲಾ ಜನರ ಮನಸ್ಸನ್ನು ಸೂರೆಗೊಂಡರು. ಅವರು ಬೌತಿಕವಾಗಿ ನಮ್ಮನ್ನು ಬಿಟ್ಟು ಹೋಗಿದ್ದರೂ ಕೂಡ ಅವರು ಎಲ್ಲ ಕಾಲಕ್ಕೂ ಎಲ್ಲಾ ಕನ್ನಡಿಗರ ಮನಸ್ಸಿನಲ್ಲಿ ಹಸಿರಾಗಿ ಉಳಿದಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.