ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜೆಡಿಎಸ್ ರಾಜ್ಯಾದ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ಸೆಕ್ಯೂರಿಟಿ ಟೆಂಡರ್ನಲ್ಲಿ ಭ್ರಷ್ಟಾಚಾರ ನಡೆದಿದ್ದರು, ಮುಖ್ಯಮಂತ್ರಿಯವರು ಸಚಿವರ ವಿರುದ್ಧ ಕ್ರಮ ಕೈಗೊಂಡಿಲ್ಲ. ರಾಜ್ಯ ಸರಕಾರ ಭ್ರಷ್ಟರ ರಕ್ಷಣೆಗಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು
ರಾಜ್ಯಸಭೆ ಚುನಾವಣೆಗೆ ಬಿ.ಎ.ಫಾರೂಖ್ ಅವರನ್ನು ಕಣಕ್ಕಿಳಿಸಲಾಗಿದೆ. ಚುನಾವಣೆಯ ದಿನ ಏನು ಬೇಕಾದರು ಆಗಬಹುದು. ಯಾರು ಯಾರೀಗೆ ಮತದಾನ ಮಾಡುತ್ತಾರೊ ನೋಡೋಣ. ಮೊನ್ನೆ ಪಕ್ಷೇತರ ಶಾಸಕರು ಜೆಡಿಎಸ್ ಪರವಾಗಿದ್ದರು. ಆದರೆ, ಇದೀಗ ಕಾಂಗ್ರೆಸ್ ಅವರನ್ನು ಸೆಳೆದುಕೊಂಡಿದೆ ಎಂದು ಹೇಳಿದರು.