ಸಿಎಂ ಅಧಿಕಾರದಿಂದ ಕೆಳಗಿಳಿಯುವುದು ಉಹಾಪೋಹ: ಉಗ್ರಪ್ಪ

ಶುಕ್ರವಾರ, 26 ಫೆಬ್ರವರಿ 2016 (19:04 IST)
ಡೈಮಂಡ್ ವಾಚ್ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಬಳಿಕ ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎನ್ನುವ ವರದಿಗಳು ಉಹಾಪೋಹ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
 
ವಿಪಕ್ಷಗಳು ಅನಗತ್ಯವಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದಾರೆ ಎಂದು ಸುಳ್ಳು ವರದಿಗಳನ್ನು ಹರಡಿಸುತ್ತಿವೆ. ವೈಯಕ್ತಿಕ ಟೀಕೆ ಕುಮಾರಸ್ವಾಮಿಗೆ ಶೋಭೆ ತರಲ್ಲ. ಸರಕಾರದ ಕಾರ್ಯಕ್ರಮಗಳ ಬಗ್ಗೆ ಮಾತನಾಡಲಿ ಎಂದು ಸಲಹೆ ನೀಡಿದರು.
 
ಇಲ್ಲಿಯವರೆಗೆ ಯಾವುದೇ ಆರೋಪಗಳಿಗೆ ಎಚ್‌ಡಿಕೆ ತಾರ್ಕಿಕ ಅಂತ್ಯ ನೀಡಿಲ್ಲ. ಆರೋಪಗಳನ್ನು ಮಾಡುವುದಷ್ಟೆ ಅವರ ಕಾಯಕವಾಗಿದೆ. ಹತಾಷರಾಗಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು.
 
ವಿಪಕ್ಷಗಳ ಗಾಳಿಸುದ್ದಿಗಳನ್ನು ಜನತೆ ನಂಬುವ ಅಗತ್ಯವಿಲ್ಲ. ಕೇವಲ ಸುಳ್ಳು ಸುದ್ದಿಗಳನ್ನು ಹರಡಿಸುತ್ತಿವೆ ಎಂದು ಕಾಂಗ್ರೆಸ್ ಮುಖಂಡ ವಿ.ಎಸ್.ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ