ಕಾಂಗ್ರೆಸ್ ಸರ್ಕಾರ ಒಂದು ಗುಂಟೇನೂ ಡಿನೋಟಿಫೈ ಮಾಡಿಲ್ಲ: ಸಿಎಂ ತಿರುಗೇಟು

ಶುಕ್ರವಾರ, 25 ಜುಲೈ 2014 (17:03 IST)
ಅರ್ಕಾವತಿ ಬಡಾವಣೆಯ ಡಿನೋಟಿಫಿಕೇಶನ್ ಕುರಿತಂತೆ ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿ, ಶೆಟ್ಟರ್ ಅವಧಿಯಲ್ಲಿ 422 ಎಕರೆ ಡೀನೋಟಿಫೈ‌ಗೆ ನಿರ್ಧರಿಸಲಾಯಿತು. ಶೆಟ್ಟರ್ ಅವಧಿಯ ನಿರ್ಧಾರಕ್ಕೆ ನಾವು ಒಪ್ಪಿಗೆ ಕೊಟ್ಟೆವು ಎಂದು ಸಿಎಂ  ತಿರುಗೇಟು ನೀಡಿದ್ದಾರೆ.

ಶೆಟ್ಟರ್ ಅವಧಿಯಲ್ಲಿ ಯಾವುದೇ ಶಿಫಾರಸು ಇಲ್ಲದೇ ಡಿನೋಟಿಫೈ ಮಾಡಲಾಗಿದೆ. ಎಲ್ಲಾ ಡಿನೋಟಿಫಿಕೇಶ್ ಬಿಜೆಪಿ ಅವಧಿಯಲ್ಲೇ ಆಗಿದೆ. ಕಾಂಗ್ರೆಸ್ ಸರ್ಕಾರ ಒಂದು ಗುಂಟೇನೂ ಡಿನೋಟಿಫೈ ಮಾಡಿಲ್ಲ. ಬಿಎಸ್‌ವೈ ಕಾಲದಲ್ಲಿ 198 ಎಕರೆ ಡಿನೋಟಿಫೈ ಆಗಿದೆ. ಶೆಟ್ಟರ್ ಅವಧಿಯಲ್ಲಿ 422 ಎಕರೆ ಡಿನೋಟಿ ಫೈ ಆಗಿದೆ.

ಶೆಟ್ಟರ್ ಅವಧಿಯ ನಿರ್ಣಯವನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಜಾರಿ ಮಾಡಲಾಗಿದ ಎಂದು ಸಿಎಂ ಸ್ಪಷ್ಟನೆ ನೀಡಿದರು. ಸಿಎಂ ಹೇಳಿಕೆಗೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದಾಗ ಸದನದಲ್ಲಿ ಗದ್ದಲವೆದ್ದಿತು.  

ವೆಬ್ದುನಿಯಾವನ್ನು ಓದಿ