ರಾಜ್ಯದ ಶಾಲೆಗಳಲ್ಲಿ ಕಾಂಗ್ರೆಸ್ ಕಾಮಗಲಭೆ ಎಬ್ಬಿಸಿದೆ: ಆಯನೂರು

ಶುಕ್ರವಾರ, 21 ನವೆಂಬರ್ 2014 (12:44 IST)
ರಾಜ್ಯದ ಶಾಲೆಗಳಲ್ಲಿ ಕಾಂಗ್ರೆಸ್ ಕಾಮಗಲಭೆ ಎಬ್ಬಿಸಿದೆ. ನಂದಿತಾ ಸಾವಿನ ಪ್ರಕರಣದಲ್ಲಿಸರಕಾರ ದಾರಿ ತಪ್ಪಿಸುತ್ತಿದೆ ಎಂದು ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಆರೋಪಿಸಿದ್ದಾರೆ.
 
ಸಚಿವ ಕಿಮ್ಮನೆ ರತ್ನಾಕರ ನಂದಿತಾ ಸಾವಿನ ಪ್ರಕರಣದ ದಾರಿ ತಪ್ಪಿ ಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಪ್ರಕರಣಕ್ಕೆ ಕೋಮುಗಲಭೆಯ ಬಣ್ಣ ಹಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
 
ಸಚಿವ ಕಿಮ್ಮನೆ ರತ್ನಾಕರ ಅಸಮರ್ಥ ಸಚಿವರಲ್ಲಿ ನಂಬರ್ ಒನ್ ಆಗಿದ್ದಾರೆ. ಕರ್ತವ್ಯನಿರ್ವಹಣೆಯಲ್ಲಿ ವಿಫಲವಾದ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬದಲು ಸರಕಾರ ಅಂತಹ ಶಾಲೆಗಳ ಅಡಳಿತ ಮಂಡಳಿಗಳಿಗೆ ಬೆಂಬಲ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ