ಬೀದರ್ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಕಾಂಗ್ರೆಸ್ ಮುಖಂಡನ ಕಿರುಕುಳ

ಶನಿವಾರ, 23 ಆಗಸ್ಟ್ 2014 (19:30 IST)
ಬೀದರ್ ಜಿಲ್ಲೆ ಹುಮ್ನಾಬಾದ್ ಎಸ್‌ಟಿ ಮೋರ್ಚಾ ಅಧ್ಯಕ್ಷ ವಿಜಯಕುಮಾರ್ ನಾಥೆ  3 ತಿಂಗಳಿನಿಂದ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದ ಘಟನೆ ನಡೆದಿದೆ. ವಿಜಯಕುಮಾರ್ ರಾತ್ರಿ 9 ಗಂಟೆಗೆ ಬಂದು ಪ್ರತಿದಿನ ದುಬಲಗುಂಡಿ ಗ್ರಾಮದ ಹಾಸ್ಟೆಲ್ ಬಾಗಿಲು ಬಡಿಯುತ್ತಿದ್ದ.

7ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರಿದ್ದ ಕಸ್ತೂರಬಾ ಪ್ರೌಢ ಶಾಲೆಯ ಹಾಸ್ಟೆಲ್‌ನಲ್ಲಿ 45 ವಿದ್ಯಾರ್ಥಿನಿಯರಿದ್ದಾರೆ. ಕಾಂಗ್ರೆಸ್ ಮುಖಂಡ ವಿಜಯಕುಮಾರ್ ಆಣತಿಯಂತೆ ಹಾಸ್ಟೆಲ್ ಗ್ರಾಮದಿಂದ ಹೊರವಲಯಕ್ಕೆ ಸ್ಥಳಾಂತರ ಮಾಡಲಾಗಿತ್ತೆಂದು ಹೇಳಲಾಗಿದೆ.. ಕುಡಿದ ಅಮಲಿನಲ್ಲಿ ಗೆಳೆಯರೊಂದಿಗೆ ಬಂದು  ಬಾಲಕಿಯರ ಜೊತೆ ಅಸಭ್ಯವಾಗಿ ವರ್ತಿಸುತ್ತಾನೆ.

ಹಾಸ್ಟೆಲ್ ಬಾಗಿಲನ್ನು ಒದೆಯುತ್ತಾನೆ. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಾನೆ ಎಂದು ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿ ವಿಜಯಕುಮಾರ್ ನಾಥೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ