ಸಭೆಯಲ್ಲಿ ಪಕ್ಷದ ಹಲವು ಶಾಸಕರು ಭಾಗಿಯಾಗಿ ಸಚಿವರ ವಿರುದ್ಧ ಹಲವು ದೂರುಗಳನ್ನು ನೀಡಬೇಕು ಎಂದಿದ್ದ ಹಿನ್ನೆಲೆಯಲ್ಲಿಯೇ ಸಿದ್ದರಾಮಯ್ಯ ಈ ಸಭೆಯನ್ನು ಕರೆದಿದ್ದರು ಎನ್ನಲಾಗಿದ್ದು, ಸಭೆಯಲ್ಲಿ ಸಚಿವರು ಭಾಗಿಯಾದ ಹಿನ್ನೆಲೆಯಲ್ಲಿ ಶಾಸಕರು ದೂರು ನೀಡಲು ಹಿಂಜರಿದರು. ಈ ಹಿನ್ನೆಲೆಯಲ್ಲಿ ಸಭೆಯನ್ನು ಆರಂಭಕ್ಕೂ ಮುನ್ನವೇ ಅಂತ್ಯಗೊಳಿಸಲಾಯಿತು ಎಂದು ತಿಳಿದು ಬಂದಿದೆ.
ಆದರೆ, ಇದೇ ವೇಳೆ ಸಭೆಯ ನೇತೃತ್ವವನ್ನು ಸಿಎಂ ಸಿದ್ದರಾಮಯ್ಯನವರು ವಹಿಸಿದ್ದ ಹಿನ್ನೆಲೆಯಲ್ಲಿ ಹಲವು ಹಿರಿಯ ಶಾಸಕರು ಗುಂಪು ಸಿಎಂ ಬಳಿ ತೆರಳಿ ಸಚಿವರನ್ನು ಹೊರತುಪಡಿಸಿ ಕೇವಲ ಶಾಸಕರೊಂದಿಗೆ ಮಾತ್ರವೇ ಸಭೆ ನಡೆಸಿ ಎಂದು ಮನವಿ ಮಾಡಿಕೊಂಡರು. ಇದಕ್ಕೆ ಸಿಎಂ ಸಿದ್ದರಾಮಯ್ಯ ನಿರಾಕರಿಸಿದರು ಎನ್ನಲಾಗಿದೆ.