ರವಿ ಅವರ ಪ್ರಕರಣದಲ್ಲಿ ಸರ್ಕಾರ ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸುತ್ತಿದ್ದಾಗ ಸರ್ಕಾರದ ಅಥವಾ ಪಕ್ಷದ ಪರವಾಗಿ ಸಿಎಂ ಸಿದ್ದರಾಮಯ್ಯನವರಿಗೆ ಯಾವೊಬ್ಬ ಸಚಿವರೂ ಕೂಡ ಬೆಂಬಲಿಸಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಕೋಲಾಹಲ ನಡೆಯುತ್ತಿದ್ದಾಗ ಕೇವಲ ನಾಲ್ಕೈದು ಸಚಿವರು ಮಾತ್ರ ಕಾಣಿಸಿಕೊಂಡಿದ್ದರು. ಇವರನ್ನು ಬಿಟ್ಟರೆ ಸರ್ಕಾರದಲ್ಲಿ ಉಳಿದ ಸಚಿವರಿಲ್ಲವೇ, ಕೇವಲ ಅಧಿಕಾರಕ್ಕೆ ಮಾತ್ರ ಸಚಿವರಾಗಿ ಮುಂದುವರಿಯುತ್ತಿದ್ದಾರೆ ಎಂದು ಸಭೆಯಲ್ಲಿ ಪ್ರಶ್ನಿಸುವ ಮೂಲಕ ಸರ್ಕಾರ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಸಿಎಂ ಸಿದ್ದರಾಮಯ್ಯನವರೂ ಕೂಡ ವಿಪಕ್ಷಗಳ ವಿರುದ್ಧ ಗರಂ ಆಗಿದ್ದು, ವಿಪಕ್ಷಗಳ ನಾಯಕರು ವಿನಾಃ ಕಾರಣ ತಮ್ಮ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದು, ರಾಜಕೀಯ ಕುತಂತ್ರವನ್ನು ಸಾಧಿಸುತ್ತಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡಬೇಕಿದೆ ಎಂದರು. ಇದಕ್ಕೆ ಪಕ್ಷದ ಎಲ್ಲಾ ಸದಸ್ಯರು ಬೆಂಬಲಿಸಿದರು ಎನ್ನಲಾಗಿದೆ.