ಕಲುಷಿತ ಆಹಾರ ಸೇವನೆ : 25 ಕ್ಕೂ ಹೆಚ್ಚು ಕೈದಿಗಳು ಅಸ್ವಸ್ಥ

ಸೋಮವಾರ, 6 ಜುಲೈ 2015 (11:39 IST)
ದಾವಣಗೆರೆ ಉಪಕಾರಾಗೃಹದಲ್ಲಿ 25ಕ್ಕೂ ಹೆಚ್ಚು ಕೈದಿಗಳು ಅಸ್ವಸ್ಥಗೊಂಡಿದ್ದು ವಿಷಾಹಾರ ಸೇವನೆಯೇ ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ. 

ಅಸ್ವಸ್ಥಗೊಂಡಿರುವ ಕೈದಿಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
 
ಮಾಂಸಾಹಾರ ಊಟ ಮಾಡಿದ ನಂತರ ಕೈದಿಗಳು ಅಸ್ವಸ್ಥರಾಗಿದ್ದರು. ನಿನ್ನೆ ರಾತ್ರಿ ಅವರೆಲ್ಲರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
 
ಇವರೆಲ್ಲರೂ ವಿಚಾರಣಾಧೀನ ಕೈದಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ. ಕಲುಷಿತ ಆಹಾರ ಸೇವನೆಯಿಂದ ಇವರೆಲ್ಲರು ಅಸ್ವಸ್ಥರಾಗಿದ್ದಾರೆ ಎಂದು ವೈದ್ಯರು ಖಚಿತ ಪಡಿಸಿದ್ದಾರೆ. 
 
ಜಿಲ್ಲಾ ರಕ್ಷಣಾಧಿಕಾರಿ ಡಾ ಎಂ.ಬಿ. ಬೋರಲಿಂಗಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ