ರೆಡ್ಡಿ ಬಿಡುಗಡೆಯನ್ನು ನ್ಯಾಯಾಲಗಳು ನಿರ್ಧರಿಸುತ್ತವೆ: ಶ್ರೀರಾಮುಲು

ಮಂಗಳವಾರ, 20 ಮೇ 2014 (11:09 IST)
ಜನಾರ್ದನ ರೆಡ್ಡಿ ಒಬ್ಬರೇ ಅಲ್ಲ, ನನ್ನ ಎಲ್ಲಾ ಶಾಸಕರು ಜೈಲಿನಲ್ಲಿದ್ದಾರೆ. ಅವರೆಲ್ಲರ ಬಿಡುಗಡೆಯಾಗಬೇಕು ಎನ್ನುವುದು ನನ್ನಾಸೆ. ಆದರೆ ಕಾನೂನಿಗೆ ತಲೆಬಾಗಲೇಬೇಕು. ರೆಡ್ಡಿ ಬಿಡುಗಡೆಯನ್ನು ನ್ಯಾಯಾಲಯಗಳು ನಿರ್ಧರಿಸುತ್ತವೆ ಎಂದು ಬಿಜೆಪಿ ಸಂಸದ ಶ್ರೀರಾಮುಲು  ದೆಹಲಿಯಲ್ಲಿ ಹೇಳಿದರು.

ಮೋದಿ ನೇತೃತ್ವದ ಸರ್ಕಾರದ ಮೇಲೆ ಜನಾರ್ದನ ರೆಡ್ಡಿ ಬಿಡುಗಡೆಗೆ ಯಾವುದೇ ಒತ್ತಡವಿಲ್ಲ. ಸುಷ್ಮಾ ಸ್ವರಾಜ್ ಜತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಶೀಘ್ರದಲ್ಲೇ ಅವರನ್ನು ಭೇಟಿ ಮಾಡುತ್ತೇನೆ ಎಂದು ಶ್ರೀರಾಮುಲು ಹೇಳಿದರು.

ಬಿಜೆಪಿ-ಬಿಎಸ್‌ಆರ್ ಕಾಂಗ್ರೆಸ್ ವಿಲೀನ ವಿಚಾರವಾಗಿ ಮಾತನಾಡುತ್ತಾ, ವಿಲೀನಕ್ಕೆ ಕೆಲವು ಕಾನೂನು ತೊಡಕಿದೆ. ಆ ತೊಡಕನ್ನು ನಿವಾರಿಸಿಕೊಂಡು ವಿಲೀನದ ಬಗ್ಗೆ ಯತ್ನಿಸುತ್ತೇನೆ ಎಂದು ಶ್ರೀರಾಮುಲು ಹೇಳಿದರು. 

ವೆಬ್ದುನಿಯಾವನ್ನು ಓದಿ