ಯಾದಗಿರಿಯಲ್ಲಿ ಜಿ.ಪಂ. ಸದಸ್ಯನಿಂದ ಬೆದರಿಕೆ
ಯಾದಗಿರಿಯಲ್ಲಿ ಕೂಡ ಕಂದಕೂರ ಜಿ.ಪಂ. ಸದಸ್ಯ ಬೀಮರಾಯ ಜಿ.ಪಂ. ಸ್ಥಾಯಿಸಮಿತಿ ಚುನಾವಣೆ ಸಂದರ್ಭದಲ್ಲಿ ಬೆದರಿಕೆ ಹಾಕಿದ ಘಟನೆ ನಡೆದಿದೆ. ಮತಪೆಟ್ಟಿಗೆಗಳಿಗೆ ನೀರು ಸುರಿದು ಪ್ರತಿಭಟನೆ ವ್ಯಕ್ತಪಡಿಸಿದರು. ತಮಗೆ ಚುನಾವಣೆಯ ನೋಟಿಸ್ ತಲುಪಿಲ್ಲದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅಧಿಕಾರಿಗಳನ್ನು ಶೂಟ್ ಮಾಡುವುದಾಗಿ ಬೆದರಿಕೆ ಹಾಕಿದರು. ಸಿಇಒ ವಿರುದ್ಧ ಅವರು ಜಾತಿ ನಿಂದನೆ ಆರೋಪವನ್ನೂ ಮಾಡಿದರು.